ಬೆಂಗಳೂರು: ಇಂದು ಮಾಜಿ ಸಿಎಂ ಕುಮಾರಸ್ವಾಮಿ ವಿದೇಶದಿಂದ ಬಂದಿದ್ದಾರೆ. ಈ ವೇಳೆ ಏರ್ಪೋರ್ಟ್ ನಲ್ಲಿ ಮಾತನಾಡಿದ ಕುಮಾರಸ್ವಾಮಿ, ಪೆನ್ ಡ್ರೈವ್ ಈಗಲೇ ರಿಲೀಸ್ ಮಾಡಲ್ಲ ಎಂದಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ನವರು ಈಗ ಅಸ್ತಿತ್ವ ಕಳೆದುಕೊಂಡು ಬಿಟ್ಟಿದ್ದಾರೆ. ಮುಳುಗಿ ಹೋಗಿದ್ದಾರೆ. ಆ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರಾಗಲಿ ಈ ರೀತಿ ಮಾತನಾಡುತ್ತಿದ್ದಾರೆ ಎನಿಸುತ್ತಿದೆ. ಬಿಜೆಪಿಯವರಂತು ಹತಾಶರಾಗಿದ್ದಾರೆ. ಪ್ಲೇಯಿಂಗ್ ಲೆವೆಲ್ ನಲ್ಲಿ ಕ್ಯಾಪ್ಟನ್ ನ ಹುಡುಕಿದರೆ, ಇವರು ಬೇರೆಯದ್ದೇ ರೀತಿಯಲ್ಲಿ ಹುಡುಕುತ್ತಿದ್ದಾರೆ.
40% ಸರ್ಕಾರ ಅಂತ ಎನಿಸಿಕೊಂಡವರು ಅವರು. 40% ಸರ್ಕಾರ ಇದ್ದಾಗ ಇವರು ಯಾಕೆ ಮಾತನಾಡಲಿಲ್ಲ. ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಕೂಡ ಹೇಳಿದ್ದಾರೆ. ಪೆನ್ ಡ್ರೈವ್ ಪೆನ್ ಡ್ರೈವ್ ಅಂತಾರೆ. ಎಲ್ಲಿ ಹೋಯ್ತಪ್ಪ ಪೆನ್ ಡ್ರೈವ್. ಇವತ್ತು ನೋಡಿದ್ರೆ ಬಿಡುಗಡೆ ಮಾಡಲ್ಲ ಅಂತಿದ್ದಾರೆ. ಬಿಡುಗಡೆ ಮಾಡಿ ನಾವೂ ತನಿಖೆ ಮಾಡ್ತೀವಿ. ಎಸ್ ಪಿ ರೋಡಲ್ಲಿ ಎಷ್ಟು ಪೆನ್ ಡ್ರೈವ್ ಸಿಗಲ್ಲ. ಸುಮ್ಮನೆ ಕಂಟೆಂಟ್ ಇಲ್ಲದೆ ಏನನ್ನು ಮಾತನಾಡಬಾರದು ಜೆಡಿಎಸ್ ಅವರು ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












