ಕಾವೇರಿಗಾಗಿ ಪಿಎಂ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್

suddionenews
1 Min Read

ಕಾವೇರಿ ನೀರು ಉಳಿಸಿಕೊಳ್ಳುವುದಕ್ಕೆ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಭಾಗದಲ್ಲಂತು ರೈತರ ಹೋರಾಟ ಇನ್ನು ನಿಂತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಕಾವೇರಿ ಕೊಳ್ಳದಲ್ಲಿ ನೀರು ಖಾಲಿಯಾಗುತ್ತಾ ಇದೆ. ಇದರ ಮಧ್ಯೆ ಪ್ರತಿ ಸಲ ತಮಿಳುನಾಡಿನ ಪರವೇ ತೀರ್ಪು ಬರುತ್ತಿದೆ.

ಕಾವೇರಿಗಾಗಿ ಮೊನ್ನೆ (ಶುಕ್ರವಾರ) ನಡೆದ ಕರ್ನಾಟಕ ಬಂದ್ ನಲ್ಲೂ ಸ್ಯಾಂಡಲ್ ವುಡ್ ನಟ-ನಟಿಯರು ಕೂಡ ಕೈಜೋಡಿಸಿದ್ದರು. ಈ ವೇಳೆ ಶಿವಣ್ಣ ಕೂಡ ಕಾವೇರಿ ವಿವಾದ ಬಗೆಹರಿಸಬೇಕಾದವರು ಯಾರು ಎಂದು ಹೇಳಿದರು. ಸುಮ್ಮನೆ ಬಂದು, ಕೂತು ಹೋದಾಗ ಏನು ಪ್ರಯೋಜನವಾಗುವುದಿಲ್ಲ. ಎರಡು ರಾಜ್ಯದಲ್ಲಿ ಜನಗಳು ಆರಿಸಿದವರು ಇದ್ದಾರೆ. ಕುಳಿತು ಬಗೆಹರಿಸಿ ಎಂದೇ ಸಲಹೆ ನೀಡಿದ್ದರು.

ಇದೀಗ ಲವ್ಲಿ ಸ್ಟಾರ್ ಪ್ರೇಮ್ ಪ್ರಧಾನಿ ಮೋದಿಗೆ ಪತ್ರದ ಮೂಲಕ ಕಾವೇರಿ ನಮ್ಮದು ಎಂಬ ಮನವರಿಕೆ ಮಾಡುವುದಕ್ಕೆ ಹೊರಟಿದ್ದಾರೆ. ನಟ ಪ್ರೇಮ್ ತಮ್ಮ ರಕ್ತದ ಮೂಲಕ ಪತ್ರ ಬರೆದಿದ್ದಾರೆ. ಕಾವೇರಿ ನಮ್ಮದು. ಕಾವೇರಿ ವಿಚಾರಕ್ಕೆ ನಮಗೆ ನ್ಯಾಯ ಕೊಡಿಸಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *