ಬೊಗಳೋ ನಾಯಿ ಕಚ್ಚೋದಿಲ್ಲ ಎನ್ನುವ ಮಾತಿದೆ : ಕೊಲೆ ಬೆದರಿಕೆ ಬಗ್ಗೆ ಮುತಾಲಿಕ್ ಮಾತು

suddionenews
1 Min Read

ಧಾರವಾಡ: ಮುತಾಲಿಕ್ ಮತ್ತು ಯಶ್ ಪಾಲ್ ಸುವರ್ಣ ಅವರ ತಲೆ ಕಡಿದರೆ 20 ಲಕ್ಷ ಹಣ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಓಪನ್ ಆಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಮಾತನಾಡಿರುವ ಪ್ರಮೋದ್ ಮುತಾಲಿಕ್, ಇದು ಮೊದಲ ಬಾರಿಯ ಬೆದರಿಕೆ ಏನು ಅಲ್ಲ. 2009ರಲ್ಲಿ ಕಾಸರಗೋಡು ಮತ್ತು ಮಂಗಳೂರು ಬಾರ್ಡರ್ ನಲ್ಲಿ ರಶೀದ್ ಮತ್ತು ಅವರ ಸಂಗಡಿಗರು ಸಿಕ್ಕಿದ್ದರು. ಪಿಸ್ತೂಲ್ ಮತ್ತು ಜೀವಂತ ಗುಂಡುಗಳು ಸಿಕ್ಕಿದ್ದವು. ಅವರನ್ನು ವಿಚಾರಣೆ ಮಾಡಿದಾಗ ಪ್ರಮೋದ್ ಮುತಾಲಿಕ್ ಮತ್ತು ವರುಣ್ ಗಾಂಧಿ ಇಬ್ಬರನ್ನು ಕೊಲೆ ಮಾಡಲು ಸುಪಾರಿ ತೆಗೆದುಕೊಂಡಿರುವುದಾಗಿ ಬಾಯ್ಬಿಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಬೆದರಿಕೆಗಳು ಬರ್ತಾನೆ ಇದ್ದಾವೆ.

ಬೊಗಳೊ ನಾಯಿ ಕಚ್ಚೋದಿಲ್ಲ ಎಂಬುದು ಇದೆ. ಎರಡನೆಯದು ಬೆದರಿಕೆಗೆ ಹೆದರುವ ಹಿಂದೂ ಕಾರ್ಯಕತ್ರು ಇಲ್ಲ. ಇನ್ನು ಗಟ್ಟಿಯಾಗಿ, ಪ್ರಕರವಾಗಿ ಹಿಂದುತ್ವ, ದೇಶಭಕ್ತಿಯ ವಿಚಾರವಾಗಿ ಸಂವಿಧಾನ ಬದ್ಧ, ಕಾನೂನು, ಸಂವಿಧಾನ ಬಿಟ್ಟು ಹೋರಾಟ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾವೂ ಹೆದರುವಂಥದ್ದಲ್ಲ. ಈ ಸಂಬಂಧ ಹುಬ್ಬಳ್ಳಿಯ ಪೊಲೀಸರಿಗೆ ಒಂದು ದೂರನ್ನು ಕೊಡುವಂತ ನಿರ್ಧಾರ ಮಾಡಿದ್ದೇನೆ. ಮೀನುಗಾರ ಸಂಘಟನೆಯ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರಿಗೂ ಬೆದರಿಕೆ ಬಂದಿದೆ.

ಇದೆಲ್ಲವು ಹಿಜಾಬ್, ಹಲಾಲ್, ನಮ್ಮ ಉಗ್ರವಾದ ಪ್ರತಿಭಟನೆಯ ಹಿನ್ನಲೆಯಲ್ಲಿ ಈ ಬೆದರಿಕೆ ಕೊಟ್ಟಿದ್ದಾರೆ. ಮುಸ್ಲಿಂ ಪೇಜ್ ಬಹಳ ಡೇಂಜರಸ್ ಇದೆ. ಇದು ನಮಗಷ್ಟೇ ಅಲ್ಲ, ಸುವರ್ಣ ಯಶ್ ಪಾಲ್ ಗಷ್ಟೇ ಅಲ್ಲ. ಇನ್ನು ಸಾಕಷ್ಟು ಜನರಿಗೆ ಬೆದರಿಕೆ ನೀಡಿದ್ದಾರೆ. ಹಿಂದೂ ದೇವ ದೇವತೆಗಳನ್ನು ಕೆಟ್ಟದಾಗಿ ಅವಹೇಳನ ಮಾಡುವ ಪೇಜ್ ಇದೆ. ಇಂಥ ಪೇಜ್ ಗಳಿಂದ ದೂರು ಕೊಟ್ಟರು ಇನ್ನು ಕ್ರಮ ತೆಗೆದುಕೊಂಡಿಲ್ಲ. ಮುಸ್ಲಿಂ ಮರ ವಿರುದ್ಧ ಮಾತನಾಡಲೇ ಬಾರದಾ..? ಕೋರ್ಟ್ ಹಿಜಾಬ್ ವಿಚಾರಕ್ಕೆ ನೀಡಿರುವ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದೀರಾ ಅದರ ಬಗ್ಗೆ ಮಾತನಾಡಬಾರದಾ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *