ಚಿಕ್ಕಬಳ್ಳಾಪುರ: ಸದ್ಯ ಚಿಕ್ಕಬಳ್ಳಾಪುರದಲ್ಲೆಲ್ಲಾ ಶಾಸಕ ಪ್ರದೀಪ್ ಈಶ್ವರ್ ದೇ ಮಾತು. ಮನೆ ಮನೆಗೂ ಹೋಗಿ, ಸಮಸ್ಯೆಗಳನ್ನು ಕೇಳಿಕೊಂಡು, ಅಲ್ಲಿಯೇ ಪರಿಹಾರ ತಿಳಿಸುತ್ತಾರೆ. ಸಮಾಜ ಸೇವೆ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇತ್ತಿಚೆಗೆ ಸಂಸದ ಮುನಿಸ್ವಾಮಿ ಅವರು, ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಮೊದಲನೇ ಹುಚ್ಚ ವೆಂಕಟ್ ಮುನಿಸ್ವಾಮಿ ಎಂದ ಪ್ರದೀಪ್ ಈಶ್ವರ್, ಮೆಂಟಲ್ ಮುನಿಸ್ವಾಮಿ ಅಂತ ಕೋಲಾರ ಸಂಸದರ ಹೆಸರು ಇದೆ. ಸಂಸದ ಮುನಿಸ್ವಾಮಿ ರೌಡಿಶೀಟರ್. ಅವರ ಮೇಲೆ ಕೇಸ್ ಗಳಿವೆ. ನಾನು ದಾಖಲೆ ಇಟ್ಟುಕೊಂಡು ಮಾತನಾಡುತ್ತೇನೆ. ವೈಯಕ್ತಿಕವಾಗಿ ಮಾತನಾಡಿದರೆ ನಾನು ಕೂಡ ಮಾತನಾಡುತ್ತೇನೆ. ಬಿಜೆಪಿ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್ ರೀತಿ ಆಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











