Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಪಿಇ ಕಿಟ್ ಹಗರಣ: ಬಿಎಸ್ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು..!

---Advertisement---

ಬೆಂಗಳೂರು: ಕೊರೊನಾ ಹಗಣರದ ಬಗ್ಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಪಿಪಿಇ ಕಿಟ್ ಬಗ್ಗೆ ಕೇಳಿ ಬಂದ ಹಗರಣದ ಬಗ್ಗೆ ವರದಿ ನೀಡಲಾಗಿದೆ. ಈ ವರದಿಯನ್ನು ಜಸ್ಟೀಸ್ ಕುನ್ಹಾ ಆಯೋಗದಿಂದ ಪರಿಶೀಲನೆ ಮಾಡಿದ್ದು, ಬಿಎಸ್ವೈ ಹಾಗೂ ಶ್ರೀರಾಮು ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಲು ಶಿಫಾರಸು ಮಾಡಿದೆ. 2020 ಖರೀದಿ ಸಂಬಂಧ ತನಿಖೆಯಾಗಬೇಕು ಎಂಬ ಬಗ್ಗೆ ಆಗ್ರಹ ಕೇಳಿ ಬರ್ತಾ ಇದೆ.

ಆದರೆ ಕೋವಿಡ್ ಕಾಲದ ಪೂರ್ಣ ಪ್ತಮಾಣದ ವರದಿಯನ್ನು ಈಗ ಸಲ್ಲಿಕೆ ಮಾಡಿಲ್ಲ. ಡಾ.ಸುಧಾಕರ್ ಅವಧಿಯ ಕಡತಗಳ ಪರಿಶೀಲನೆ ಇನ್ನು ಕೂಡ ಬಾಕಿ ಇದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಶ್ರೀರಾಮುಲು ಅವರು ಸಚಿವರಾಗಿದ್ದಾಗ ಏನೆಲ್ಲಾ ಆಯ್ತು ಎಂಬುದರ ವರದಿ ಮಾತ್ರ ರೆಡಿಯಾಗಿದೆ. ಈ ಮೂಲಕ ಬಿಎಸ್ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು ಮಾಡಲಾಗಿದೆ. ಜಸ್ಟೀಸ್ ಜಾನ್ ಡಿ ಮೈಕಲ್ ಕುನ್ಹಾ ಆಯೋಗ ಶಿಫಾರಸು ಮಾಡಿದೆ.

ವರದಿಯಲ್ಲಿ, ಸ್ಥಳೀಯ ಕಂಪನಿಗಳಿಂದ 446 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಚೀನಾ ಕಂಪನಿಗಳಿಂದ 2117 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಅದೇ .ಅದರಿಯ, ಅದೇ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ಚೀನಾ ಕಂಪನಿಗಳಿಂದ ಅಂದಿನ ಸರ್ಕಾರ ಖರೀದಿ ಮಾಡಿತ್ತು. ಪಿಪಿಇ ಕಿಟ್ ಖರೀದಿ ವೇಳೆ ದರದಲ್ಲು ಭಾರೀ ವ್ಯತ್ಯಾಸವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ಅನಗತ್ಯವಾಗಿ ಲಾಭ ಮಾಡಿಕೊಡಲಾಗಿತ್ತು ಎಂಬ ಆರೋಪವೂ ಇದೆ. ಹೀಗಾಗಿ ಸರ್ಕಾರ ಈ ಕೇಸನ್ನು ಎಸ್ಐಟಿಯನ್ನು ರಚಿಸಿ ಅದಕ್ಕೆ ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...