ಚಿತ್ರದುರ್ಗ | ಮಾ.13ರಂದು ನಗರ ಮತ್ತು ಗ್ರಾಮಾಂತರ ಪ್ರದೇಶದ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ…!

suddionenews
1 Min Read

ಚಿತ್ರದುರ್ಗ, (ಮಾರ್ಚ್.12) : ಮಾರ್ಚ್ 13 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾನ್ಹ 3 ಗಂಟೆಯವರೆಗೆ ಚಿತ್ರದುರ್ಗದಲ್ಲಿ ಪವರ್ ಟ್ರಾನ್ಸ್‌ಫಾರ್ಮ್‌ ನ ತುರ್ತು ನಿರ್ವಹಣೆ ಕಾಮಗಾರಿ ನಿರ್ವಹಿಸುವುದರಿಂದ

ಸರಬರಾಜಾಗುವ ಚಿತ್ರದುರ್ಗ ನಗರದ ಹಲವು ಬಡಾವಣೆಗಳು ಮತ್ತು ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.

ವಿದ್ಯುತ್‌ ಅಡಚಣೆಗೊಳಪಡುವ ಪ್ರದೇಶಗಳು:

ನಗರದ ಆರ್ ಟಿ ಓ ಕಛೇರಿ, ಡಿಸಿ ಕಛೇರಿ, ಬಿಡಿ ರೋಡ್, ಲಕ್ಷ್ಮಿ ಬಜಾರ್, ಚಿಕ್ಕಪೇಟೆ, ದೊಡ್ಡಪೇಟೆ, ಕೆಳಗೋಟೆ, ಮುನಿಸಿಪಲ್ ಕಾಲೋನಿ, ಕೆಇಬಿ ಕ್ವಾರ್ಟರ್ಸ್, ಆಕಾಶವಾಣಿ ಸುತ್ತಮುತ್ತಲಿನ ಪ್ರದೇಶಗಳು.

ಬ್ಯಾಂಕ್ ಕಾಲೋನಿ, ಬಸಪ್ಪ ಹಾಸ್ಪಿಟಲ್, ಬಸವೇಶ್ವರ ಹಾಸ್ಪಿಟಲ್, ಹೌಸಿಂಗ್ ಬೋರ್ಡ್ ಕಾಲೊನಿ, ಬನಶಂಕರಿ ಬಡಾವಣೆ,

ವಿದ್ಯಾನಗರ, ಬಸವೇಶ್ವರ ನಗರ, ತರಳಬಾಳು ನಗರ, ವಿಶ್ವೇಶ್ವರಯ್ಯ ಬಡಾವಣೆ, ಕಾವಾಡಿಗರ ಹಟ್ಟಿ, ಗಾರಹಟ್ಟಿ, ಎನ್. ಆರ್. ನಗರ, ಮಿಲ್ ಏರಿಯ, ತಿಪ್ಪಾರೆಡ್ಡಿ ನಿವಾಸದ ಸುತ್ತಮುತ್ತಲಿನ ಪ್ರದೇಶಗಳು, ಚೇಳುಗುಡ್ಡ, ಅಗಸನಕಲ್ಲು, ನೆಹರು ನಗರ, ಎನೆರ್ಕಾನ್, ಐಪಿಪಿ,

ಮತ್ತು ಗ್ರಾಮಾಂತರ ಪ್ರದೇಶಗಳಾದ

ಗೋನೂರು, ಬೆಳಗಟ್ಟ, ಜಿಆರ್ ಹಳ್ಳಿ, ಸೀಬಾರ ಹಾಗೂ ಸಿಜಿ ಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಹೆಚ್. ತಿಮ್ಮಣ್ಣ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *