ನಮ್ಮ ನಾರಿ ಶಕ್ತಿ ನಮಗೆ ಸ್ಪೂರ್ತಿ : ಓಬವ್ವ ಜಯಂತಿಗೆ ಪ್ರಧಾನಿ ಕನ್ನಡದಲ್ಲೇ ಟ್ವೀಟ್

ಬೆಂಗಳೂರು: ಇಂದು ಎಲ್ಲೆಡೆ ಒನಕೆ ಓಬವ್ವ ಜಯಂತಿಯನ್ನ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಒನಕೆ ಓಬವ್ವನ ಬಗ್ಗೆ ಬರೆದಿದ್ದಾರೆ.

ವೀರವನಿತೆ ಒನಕೆ ಓಬವ್ವ ಜಯಂತಿಯ ವಿಶೇಷ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ನಾರಿ ಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿ ನೀಡುತ್ತಾರೆ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಒನಕೆ ಓಬವ್ವ 18 ನೇ ಶತಮಾನದ ವೀರ ಮಹಿಳೆ. ಚಿತ್ರದುರ್ಗ ಕೋಟೆಯ ಪಾಳೇಗಾರ ವೀರಮದಕರಿ‌ ನಾಯಕನ ಕೋಟೆ ಕಾವಲುಗಾರನಾಗಿದ್ದ ಕಹಳೆ ಮುದ್ದಹನುಮಪ್ಪನ ಹೆಂಡತಿ. ಶತ್ರುಗಳು ಕೋಟೆಯೊಳಗೆ ನುಗ್ಗುವಾಗ, ಮುದ್ದಹನುಮಪ್ಪ ಊಟ ಮಾಡುತ್ತಿದ್ದರು. ಊಟದ ಮಧ್ಯೆ ಏಳಿಸಬಾರದರಂದು ತಾನೇ ಒನಕೆ ಹಿಡಿದು ಶತ್ರುಗಳನ್ನ ಸದೆ ಬಡಿದ ವೀರ ವನಿತೆ.

ಹೀಗಾಗಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಿದ ಬೆನ್ನಲ್ಲೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಇಂದು ಎಲ್ಲೆಡೆ ಒನಕೆ ಓಬವ್ವನ ಸಾಹಸ ನೆನೆದು, ಆ ವೀರ ವನಿತೆಗೆ ನಮನ ಸಲ್ಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *