Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳು ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ಚಿತ್ರದುರ್ಗ, ಜೂ.05: ಪರಿಸರ ದಿನಾಚರಣೆ ದಿನ ಗಿಡಗಳನ್ನು ನೆಡುವುದಕ್ಕೆ ಬಹಳ ಮಹತ್ವವಿದೆ. ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳ ಅಗತ್ಯವಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಕಾಡು, ಮರಗಿಡಗಳ ನಾಶದಿಂದ ಪರಿಸರ ಅಸಮತೋಲವಾಗಿದೆ. ಜಾಗತಿಕ ಉಷ್ಣಾಂಶ ಏರಿಕೆಯಾಗಿದೆ.‌ ಭೂಮಿಯ ಮೇಲೆ ಜೀವ ಸಂಕುಲ ಉಳಿಯಲು ನಿರ್ದಿಷ್ಟ ಪ್ರಮಾಣದ ಅರಣ್ಯ ಇರಬೇಕಾದುದು ನಿಯಮ. ಈ ಪರಿಸರ ಸಮತೋಲ ಕಾಪಡದಿದ್ದರೆ, ಏರು ಪೇರು ಆಗುತ್ತಿದೆ. ಪರಿಸರ ಮಲಿನವಾಗಿ ಅನೇಕ ಖಾಯಿಲೆ, ರೋಗ ರುಜಿನ, ಸಾಂಕ್ರಾಮಿಕಗಳು ಹರಡುತ್ತವೆ. ನಾನು ಚಿಕ್ಕವರಿದ್ದಾಗ ಜೂನ್ ತಿಂಗಳಲ್ಲಿ ಸಸಿ ನೆಟ್ಟು, ರಕ್ತದಾನ ಮಾಡುತ್ತಿದ್ದೆವೆ. 1975 ರಲ್ಲಿ ಕಲಾ ಕಾಲೇಜು ಆವರಣದಲ್ಲಿ ನೆಟ್ಟ ಗಿಡಗಳು ಇಂದು ಮರಗಳಾಗಿ ಬೆಳೆದು ನೆರಳು ನೀಡುತ್ತಿವೆ‌ ಎಂದರು.

ಜೂನ್ 05 ರಂದು ನೆಡುವ ಗಿಡಗಳು ಪೂರ್ಣ ಪ್ರಮಾಣದಲ್ಲಿ ಮರಗಳಾದರೆ ಸಾಕಷ್ಟು ಪ್ರಮಾಣ ಅರಣ್ಯ ಅಭಿವೃದ್ಧಿ ಆಗಿರುತ್ತಿತ್ತು. ಆದರೆ ಹಾಗೆ ಆಗುವುದಿಲ್ಲ. ಸರಿಯಾದ ಕಾಳಜಿ ಹಾಗೂ ಪೋಷಣೆ ಇರದೆ ಗಿಡಗಳು ನಶಿಸುತ್ತವೆ. ಮಕ್ಕಳು ತಾವು ನೇಡುವ ಗಿಡಗಳು, ಮನೆಯ ಸುತ್ತಲಿನ ಗಿಡಮರಗಳ ಕಾಳಜಿ ವಹಿಸಬೇಕು. ನಗರದಲ್ಲಿ ಸಾಕಷ್ಟು ಮರಗಳನ್ನು ಕಡಿಯುತ್ತಿರುವುದು ನೋವಿನ ಸಂಗತಿ. ನಗರ ಅಭಿವೃದ್ಧಿಗೆ ಮರ ಕಡೆಯುವುದು ಅನಿವಾರ್ಯವಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಗಿಡ ಮರಗಳನ್ನು ಬೆಳೆಸಲಾಗುವುದು. ಕಡಿದ ಮರಗಳಿಗೆ‌ ಮೂರರಷ್ಟು ಗಿಡಗಳನ್ನು ಬೆಳಸಲಾಗುತ್ತಿದೆ. ಇದನ್ನು ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಗಮನಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ ವಿಶ್ವದಲ್ಲೇ ಜೀವಿ ವೈವಿದ್ಯ ಹೊಂದಿರುವ ಏಕೈಕ ಗ್ರಹ ಭೂಮಿ. ಇಲ್ಲ ಮಾತ್ರ ಜೀವರಾಶಿ ಇದೆ. ಭೂಮಿಯನ್ನು ಕಾಪಾಡಲು ಶೇ.33 ರಷ್ಟು ಅರಣ್ಯ ಇರುವುದು ಅವಶ್ಯಕ. ಅಭಿವೃದ್ಧಿ ಪಥದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ನಾವು ವಾಸಿಸುವ ಜಾಗದಲ್ಲಿ ಗಿಡ ಮರ ನೆಟ್ಟು ಪರಿಸರ ಸಮತೋಲ ಕಾಪಾಡಬೇಕು. ಇಂದು ಸರ್ಕಾರ, ಚುನಾವಣಾ ಆಯೋಗದ‌ ಸೂಚನೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ರಕ್ಷಣೆಗೆ ಮಹತ್ವ ನೀಡಿದಷ್ಟೇ ಪ್ರಾಮುಖ್ಯತೆ ನೀಡಿ ಚುನಾವಣೆಯಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಯುವ ಮತದಾರರು ಮರೆಯದೆ ಮತದಾನ ಮಾಡಬೇಕು ಎಂದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸಾಮಾಜಿಕ ಅರಣ್ಯ ಚಟುವಟಿಕೆ ಅಡಿ ರೈತರಿಗೆ ಸಸಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬೋಧಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ತಹಶೀಲ್ದಾರ್ ಸತ್ಯನಾರಾಯಣ, ಚುನಾವಣಾ ತಹಶೀಲ್ದಾರ್ ಕೃಷ್ಣ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಿ.ಮಮತಾ, ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಪ್ರಾದೇಶಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ವಿದ್ಯಾರ್ಥಿ ನಿಲಯದ ನಿಲಯ ಪಾಲಕರು, ವಿದ್ಯಾರ್ಥಿನಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!