ಭವಿಷ್ಯಕ್ಕಾಗಿ ದೇವರ ನುಡಿಗಾಗಿ ಕಾದು‌ಕುಳಿತ ಜನ : ಇದು ಕಾಂತಾರ ಸಿನಿಮಾ ಎಫೆಕ್ಟ್ ಹಾ..?

suddionenews
1 Min Read

ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರಾವಳಿಯ ಸಂಸ್ಕೃತಿಯನ್ನು ಈ ಸಿನಿಮಾ ಮೂಲಕ ಅನಾವರಣ ಮಾಡಲಾಗಿದೆ. ಅಲ್ಲಿನ ದೇವರು, ದೈವ, ಆಚರಣೆಯನ್ನೆಲ್ಲಾ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾವನ್ನು ಯಾರೊಬ್ಬರು ಮಿಸ್ ಮಾಡಿಕೊಂಡಂತೆ ಕಾಣುತ್ತಿಲ್ಲ. ಆದರೆ ಇದರ ಬೆನ್ನಲ್ಲೇ ರಾಜ್ಯದಲ್ಲಿ ಜಾತ್ರೆಗಳಲ್ಲೂ ದೇವರ ನುಡಿ ಕೇಳಲು ಜನ ನಾ ಮುಂದು ತಾ ಮುಂದು ಅಂತ ಇದ್ದಾರೆ.

ರಾಯಚೂರು ತಾಲೂಕಿನ ಹೆಂಬರಾಳದಲ್ಲಿ ಜಾತ್ರೆ ನಡೆದಿದೆ. ಜಾತ್ರೆಯಲ್ಲಿ ರಾಜಕೀಯ ವಿಚಾರವೇ ಹೆಚ್ಚು ಸದ್ದು ಮಾಡಿದೆ. ಮನುಷ್ಯನ ಮೈಮೇಲೆ ಬಂದ ದೇವರು ರಾಜಕೀತ ಭವಿಷ್ಯ ನುಡಿದಿದ್ದಾರೆ. ಇದು ರಾಯಚೂರಿನಲ್ಲಿ ಸಂಚಲನ ಸೃಷ್ಟಿಸಿದೆ. ಅಭ್ಯರ್ಥಿಗಳ ಸೋಲು – ಗೆಲುವಿನ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲಗೆ ಅವರಿಗೆ ಮತ್ತೊಮ್ಮೆ ಸೀಟು ಸಿಗುತ್ತೆ. ದೇವದುರ್ಗದ ದೇವತಗಲ್ ಜಾತ್ರೆಯಲ್ಲೂ ಕಾಂಗ್ರೆಸ್ ಪರ ದೇವರು ಹೇಳಿಕೆ ನೀಡಿದೆ. ಒಟ್ಟಾರೆ ಜಾತ್ರೆಗಳಲ್ಲೆಲ್ಲಾ ದೇವರನ್ನು ಆಹ್ವಾನ ಮಾಡುತ್ತೇವೆ ಎಂದು ಹೇಳುವವರಿಂದ ರಾಜಕೀಯ ಭವಿಷ್ಯ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *