ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆ. 31 : ಖಜಾನೆ ಇಲಾಖೆಯ ಬೆಂಗಳೂರು ವಿಭಾಗ ಮಟ್ಟದ “ಪಿಂಚಣಿ ಆದಲಾತ್ “ವೇಬೆಕ್ಸ್ ಕಾರ್ಯಕ್ರಮವ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಸಫರೆಸ್ಸ್ ಸಭಾಂಗಣ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲೆಯ ಪಿಂಚಣಿದಾರರ ಪಿಂಚಣಿಗೆ ಸಂಭಂಧಿಸಿದಂತೆ ಸಮಸ್ಯೆ ಕುರಿತು ಹಾಗೂ ಬ್ಯಾಂಕ್ ಮತ್ತು AG ಕಚೇರಿಗಳಲ್ಲಿ ಪಿಂಚಣಿ ಪಾವತಿಗೆ ವಿಳಂಬ,ಹಾಗೂ ಇತರೆ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಈ ಆದಲಾತ್ನಲ್ಲಿ ಬೆಂಗಳೂರಿನ AG ಕಚೇರಿ ಮುಖಸ್ಥರು, ಖಜಾನೆ ಉಪ ನಿರ್ದೆಶಕರಾದ ಭೋರಯ್ಯ, ತಾಲ್ಲೂಕು ಖಜಾನೆ ಸಹಾಯಕ ನಿರ್ದೆಶಕರಾದ ಏಳುಕೋಟಿ, ಚಳ್ಳಕೆರೆ ವೀರಭದ್ರಪ್ಪ, ಹೊಸದುರ್ಗದ ಎಸ್.ಟಿ.ಮಂಜುನಾಥ್, ಶ್ರೀಮತಿ ವಿಜಯಲಕ್ಷ್ಮೀ ಮೊಳಕಾಲ್ಮೂರು, ಪಿಂಚಿಣಿ ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೆಶಕರಾದ ಶ್ರೀಮತಿ ವಿಜಯಲಕ್ಷ್ಮೀ ಹಾಗೂ ತಾಲ್ಲೂಕು ನಿವೃತ್ತ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಸಂಗಂ, ಕಾರ್ಯದರ್ಶಿ ಪರಮೇಶ್ವರಪ್ಪ, ಖಂಜಾಚಿ ಹಾಲನಾಯ್ಕ್, ಉಪಾಧ್ಯಕ್ಷರಾದ ಶಿವಕುಮಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಬ್ಯಾಂಕ್ ಮತ್ತು ಖಜಾನೆಯ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರದುರ್ಗದಲ್ಲಿ ಪಿಂಚಿಣಿ ಕುರಿತ ನಾಪತ್ತೆಯಾದ ಜಿ.ಇ.ವಿಜಯ, ಮಹಮ್ಮದ್ ಸರ್ದಾರ್, ಕಾಟಲಿಂಗಪ್ಪ, ಆಸಿಫ್ ಆಲಿಖಾನ್ ವಿರೇಂದ್ರ ಕುಮಾರ್ ರವರ ಇವರುಗಳ ಬಗ್ಗೆ ನಾಗಾರಾಜ್ ಸಂಗಂರವರು ಪ್ರಸ್ತಾಪನೆಯನ್ನು ಮಾಡಿದರು.
