Ranjith Singh death anniversary: 495 ಭಾರತದ ಸಿಖ್ ಯಾತ್ರಾರ್ಥಿಗಳಿಗೆ ವೀಸಾ ನೀಡಿದ ಪಾಕ್..!

ಮಹಾರಾಜ ರಂಜೀತ್ ಸಿಂಗ್ ಅವರ ಪುಣ್ಯತಿಥಿ ಜೂನ್ 21-30 ರವರೆಗೆ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೂ ಭಾರತದ ಸಿಖ್ ಯಾತ್ರಾರ್ಥಿಗಳನ್ನು ಪಾಕಿಸ್ತಾನ ಆಹ್ವಾನಿಸಿದೆ. ಇದಕ್ಕಾಗಿ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ 495 ವೀಸಾಗಳನ್ನು ನೀಡಿದೆ ಎಂದು ಹೈಕಮಿಷನ್ ತಿಳಿಸಿದೆ.

ಭೇಟಿಯ ಸಮಯದಲ್ಲಿ, ಯಾತ್ರಾರ್ಥಿಗಳು ಪಂಜಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್ಗೆ ಹೋಗುತ್ತಾರೆ. ಬಳಿಕ ಅವರು ಜೂನ್ 21 ರಂದು ಪಾಕಿಸ್ತಾನವನ್ನು ಪ್ರವೇಶಿಸುತ್ತಾರೆ ಮತ್ತು 30 ಜೂನ್ 2022 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪಾಕಿಸ್ತಾನ ಹೈಕಮೀಷನ್ ಹೇಳಿದೆ.

ರಂಜಿತ್ ಸಿಂಗ್ ‘ಪಂಜಾಬ್‌ನ ಸಿಂಹ’ (ಶೇರ್-ಎ-ಪಂಜಾಬ್) ಎಂದು ಜನಪ್ರಿಯವಾಗಿದ್ದವರು. ಪಂಜಾಬ್‌ನಲ್ಲಿ ಸಿಖ್ ಸಾಮ್ರಾಜ್ಯದ ಮೊದಲ ಆಡಳಿತಗಾರ. ಸಿಖ್ ಸಾಮ್ರಾಜ್ಯವು 19 ನೇ ಶತಮಾನದ ಆರಂಭದಲ್ಲಿ ಉಪ-ಖಂಡದ ವಾಯುವ್ಯ ಪ್ರದೇಶಗಳನ್ನು ಒಳಗೊಂಡಿತ್ತು. ರಂಜಿತ್ ಅವರು ಸಾಂಪ್ರದಾಯಿಕ ಭಾರತದ ತಾಯ್ನಾಡುಗಳಾದ ಪಶ್ತೂನ್‌ಗಳಿಗೆ (ಆಫ್ಘನ್ನರು) ಆಕ್ರಮಣದ ಅಲೆಯನ್ನು ತಿರುಗಿಸಿದ ಮೊದಲ ಆಡಳಿತಗಾರರಾಗಿದ್ದರು ಮತ್ತು ಅದಕ್ಕಾಗಿ ಪಂಜಾಬ್‌ನ ಸಿಂಹ ಎಂದು ಕರೆಯಲ್ಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *