Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಹಳೇರಂಗಾಪುರ ಗ್ರಾಮ ದರ್ಶನ

---Advertisement---

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಹಳೇರಂಗಾಪುರ ಗ್ರಾಮವು ಸಿರಿಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 28 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಹಿರೇಬೆನ್ನೂರು- ಸಿರಿಗೆರೆ – ಹಳೇರಂಗಾಪುರ ಮಾರ್ಗದಲ್ಲಿದೆ.

ಗ್ರಾಮಕ್ಕೆ ಹಳೆಗ್ರಾಮ ನಿವೇಶನವು ಗ್ರಾಮದಿಂದ ಹಂಪನೂರು ರಸ್ತೆಯ ಬಲಭಾಗದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿದೆ. ಹಳೆ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.

ಹೆಸರಿನ ಮೂಲ :
ಹೆಸರಿನ ಮೂಲಕ್ಕೆ ಅನ್ವರ್ಥಕವಾಗಿ ಗ್ರಾಮದಲ್ಲಿ ಯಾವುದೇ ರಂಗನಾಥ ಸ್ವಾಮಿ ದೇವಾಲಯ ಇರುವುದಿಲ್ಲ. ಹಿಂದೆ ಗ್ರಾಮಕ್ಕೆ ಹುಗಿ ಹೊಯ್ದ ರಂಗಪ್ಪ ಎನ್ನುವ ಹೆಸರಿನ ವ್ಯಕ್ತಿಯಿಂದ ಗ್ರಾಮಕ್ಕೆ ರಂಗಾಪುರ ಹೆಸರು ಬಂದಿರಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯತೆ ಇರುತ್ತದೆ. ಗ್ರಾಮದ ನೈರುತ್ಯಕ್ಕೆ ಇರುವ ಹೊಸರಂಗಾಪುರ ಗ್ರಾಮವನ್ನು ಪ್ರತ್ಯೇಕಿಸಲು ಈ ಗ್ರಾಮಕ್ಕೆ ಹಳೇರಂಗಾಪುರ ಹೆಸರು ಬಂದಿದೆ.

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು,
ಸುತ್ತಲೂ ಸಮತಟ್ಟು, ಕೆಲವೆಡೆ ಏರು ತಗ್ಗುಗಳ ಭೂಪ್ರದೇಶವು ಕಂಡು ಬರುತ್ತದೆ. ಗ್ರಾಮದ ವಾಯುವ್ಯಕ್ಕೆ ಹಳ್ಳ ಹರಿಯುತ್ತದೆ. ಇದು ಮುಂದೆ ಭರಮಸಾಗರ ಕೆರೆಗೆ ತಲುಪುತ್ತದೆ. ಮಳೆಯಾಶ್ರಿತ ಬೆಳೆಗಳ ಜೊತೆಗೆ ಅಡಿಕೆ ಮಂತಾದ ವಾಣಿಜ್ಯ ಬೆಳೆಗಳತ್ತಲೂ ರೈತರು ಇತ್ತೀಚಿನ ದಿನಗಳಲ್ಲಿ ಗಮನಹರಿಸಿದ್ದಾರೆ.

ವೀರಗಲ್ಲು :
ಹಳೆಗ್ರಾಮ ನಿವೇಶನದಲ್ಲಿ 15 ನೇ ಶತಮಾನಕ್ಕೆ ಸೇರಿದ ಮಾಸ್ತಿಗಲ್ಲು ಇದ್ದು,ಇದು ತೃಟಿತವಾಗಿದೆ. ಇದರ ಬಳಿಯಲ್ಲಿ ಹಿಂದೆ ಆಂಜನೇಯ ಸ್ವಾಮಿ ದೇವಾಲಯವಿದ್ದ ಕುರುಹುಗಳು, ಭಗ್ನಾವಶೇಷಗಳು ಕಂಡುಬರುತ್ತವೆ. ಇದರ ಬಳಿಯಲ್ಲಿ 16 ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದ ವೀರಮಾಸ್ತಿಗಲ್ಲು ಇದ್ದು, ಐದು ಅಡಿ ಎತ್ತರವಿದೆ. ಇದು ಬಹಳಷ್ಟು ಅಪರೂಪದ್ದಾಗಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಪ್ರತಿ ವರ್ಷ ಈ ಜಾಗದಲ್ಲಿ ಗ್ರಾಮದ ಪರವಾಗಿ ಪರೇವು ಆಚರಣೆ ನಡೆಸಲಾಗುತ್ತದೆ.ಇದಕ್ಕೆ ಸಂರಕ್ಷಣೆಯ ಅಗತ್ಯತೆ ಇರುತ್ತದೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯನ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳು ಇರುವ ದೇವಾಲಯ ಇದಾಗಿದ್ದು. ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ರಥೋತ್ಸವ ನಡೆಯುತ್ತವೆ.

ಈ ದೇವಾಲಯದ ಬಳಿಯಲ್ಲಿ ಕರಿಗಲ್ಲು ಇದ್ದು , ಇದು ಗ್ರಾಮದ ಹುಗಿ ಹೊಯ್ದ ಸ್ಥಳವಾಗಿದೆ. ಇದರ ಬಳಿಯಲ್ಲಿ ಬರಹಗಲ್ಲು ಇದ್ದು ಮಳೆ ಬಾರದ ವರ್ಷಗಳಲ್ಲಿ ಇದಕ್ಕೆ ನೂರಾ ಒಂದು ಬಿಂದಿಗೆ ನೀರನ್ನು ಅಭಿಷೇಕ ಮಾಡುವ ಆಚರಣೆ ಇದೆ. ಇದು ದೇವಾಲಯಗಳಿಗೆ ಹಿಂದೆ ದಾನ ಕೊಟ್ಟ ಜಮೀನು, ಭೂಮಿಯ ಮೇರೆಗಲ್ಲಾಗಿರುತ್ತದೆ ಎಂದು ಸಂಶೋಧಕರಾದ ಹಂಪಿ ವಿ.ವಿ ಯ ಡಾ.ಸೋಮಶೇಖರ್.ಎಸ್. ವೈ. ಅಭಿಪ್ರಾಯ ಪಡುತ್ತಾರೆ. ಸ್ಥಳೀಯರು ಇದಕ್ಕೆ ನಿಪ್ಪೇಗಲ್ಲು ಎನ್ನುತ್ತಾರೆ. ಪ್ರತಿ ವರ್ಷ ಗ್ರಾಮದ ದೇವರುಗಳನ್ನು ಮಿಂಚೇರಿ ಗುಡ್ಡಕ್ಕೆ ಹೊಳೆಪೂಜೆಗಾಗಿ ಕರೆದುಕೊಂಡು ಹೋಗಲಾಗುತ್ತದೆ.

2.ದೊಣ್ಣೆ ಕೆಂಚಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ. ಈ ದೇವರ ಜಾತ್ರೆಯನ್ನು ಪ್ರತಿ ಐದು ವರ್ಷಕ್ಕೆ ಒಂದು ಬಾರಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.

3.ಕೊಲ್ಲಾಪುರದಮ್ಮ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

4.ಈಶ್ವರ ದೇವಸ್ಥಾನ:
ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಈಶ್ವರಲಿಂಗ ಹಾಗೂ ಬಸವಣ್ಣ ದೇವರನ್ನು ಪೂಜಿಸಲಾಗುತ್ತದೆ. ಇದರ ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿ ಗೌರಸಂದ್ರ ಮಾರಮ್ಮ, ಗುರುಮೂರ್ತಿ ದೇವಸ್ಥಾನವಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now