ಮೌಢ್ಯ ಮುಕ್ತ ಸಮಾಜದಿಂದ ಮಾತ್ರ ನೆಮ್ಮದಿ ಸಾಧ್ಯ : ಶ್ರೀ ಶಾಂತಲಿಂಗ ಸ್ವಾಮೀಜಿ

1 Min Read

 

ಬೆಂಗಳೂರು : ಮೌಢ್ಯ ಮುಕ್ತ ಸಮಾಜದಿಂದ ಮಾತ್ರ ನೆಮ್ಮದಿ ಸಾಧ್ಯ ಎಂದು ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

ವಿಜಯನಗರದ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ “ಕಾಲ ಧರ್ಮದ ಔಚಿತ್ಯವೇನು?” ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಏಪ್ರಿಲ್ 11 ರಂದು ಶಿವಮೂರ್ತಿ ಮುರುಘಾ ಶ್ರೀಗಳು ಜನ್ಮ ದಿನಾಚರಣೆ  ಬದಲಾಗಿ “ಸಮಾನತ ದಿನಾಚರಣೆ” ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಬೈರಮಂಗಲ ರಾಮೇಗೌಡ ಮಾತನಾಡಿ, ಶ್ರೀ ಶಿವಮೂರ್ತಿ ಮುರುಘಾ ಶ್ರೀಗಳು ಬಸವಕೆಂದ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಣ್ಣಿಸಿದರು.

ಕೆ ವಿ ನಾಗರಾಜ ಮೂರ್ತಿ, ಪೊಲೀಸ್ ಇಲಾಖೆಯ ಕು.ತ್ರಿವೇಣಿ ಅವರನ್ನು ಸನ್ಮಾನಿಸಲಾಯಿತು.

ಬಸವ ಕೇಂದ್ರದ ಅಧ್ಯಕ್ಷರಾದ ಅರುಣ್ ಕುಮಾರ್ ಡಿ ಟಿ, ಡಿ ಎಸ್ ತಿಪ್ಪೇಸ್ವಾಮಿ,  ಚಳ್ಳಕೆರೆ ಬಸವ ಕಿರಣ ಸ್ವಾಮೀಜಿ ಉಪಸ್ಥಿತರಿದ್ದರು. ವನಿತಾ ಹಿರೇಮಠ್ ವಚನಗಾಯನ ಹಾಗೂ ಅಮೃತಾ ಧುಪ್ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *