ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : ಚಿತ್ರದುರ್ಗ, ಬಳ್ಳಾರಿಯ ಇಬ್ಬರು ಅರೆಸ್ಟ್..!

1 Min Read

 

ಬೆಂಗಳೂರು: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಬಗ್ಗೆ ನಟಿ ರಮ್ಯಾ ಹಾಕಿದ್ದ ಪೋಸ್ಟ್ ತೀರಾ ಕೆಳಮಟ್ಟದ ಕಮೆಂಟ್ ಗಳನ್ನ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಂದ ಕೆಟ್ಟ ಕಮೆಂಟ್ ಗಳ ವಿರುದ್ಧ ಸಿಡಿದೆದ್ದ ರಮ್ಯಾ, ಕಮೀಷನರ್ ಗೆ ದೂರು ನೀಡಿದ್ದರು. ಇದೀಗ ಈ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದು ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲದವರು ಎಂಬುದು ಗೊತ್ತಾಗಿದೆ.

ಸಿಸಿಬಿ ಪೊಲೀಸರು ಈ ಕೇಸ್ ಗೆ ಸಂಬಂಧಿಸಿದಂತೆ ಮೂವರನ್ನ ವಿಚಾರಣೆ ಮಾಡ್ತಾ ಇದ್ದು, ಬಳ್ಳಾರಿ, ಚಿತ್ರದುರ್ಗದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಅಶ್ಲೀಲ ಕಮೆಂಟ್ ಹಾಕಿದ್ದವರ ಐಪಿ ಅಡ್ರೆಸ್ ಮೂಲಕ ಇಬ್ಬರನ್ನು ಅರೆಸ್ಟ್ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ರಮ್ಯಾ ಅವರಿಗೆ ಒಂದಷ್ಟು ಜನ ಮೆಸೇಜ್ ಮಾಡಿ, ನಮ್ಮನ್ನ ಕ್ಷಮಿಸಿ ಎಂದು ಕೇಳಿದ್ದರಂತೆ. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ ಕೆಲವರು.

ರಮ್ಯಾ ಅವರು ದೂರು ಕೊಟ್ಟ ಬಳಿಕ ಪೊಲೀಸರು ಹುಡುಕಾಟ ಶುರು ಮಾಡಿದಾಗ ಐಪಿ ಅಡ್ರೆಸ್ ನಲ್ಲಿ ನೋಡಿದಾಗ ಅದರಲ್ಲಿ ಸಾಕಷ್ಟು ಫೇಕ್ ಅಕೌಂಟ್ ಗಳೇ ಇದ್ದವು. ಆದರೂ ಕಮೆಂಟ್ ಮಾಡಿದವರನ್ನ ಹುಡುಕಿದ ಪೊಲೀಸರು, ಕೋಲಾರ, ಚಿತ್ರದುರ್ಗ, ಬಳ್ಳಾರಿಯ ಮೂಲದವರನ್ನ ಹುಡುಕಿ ತನಿಖೆ ನಡೆಸುತ್ತಿದ್ದಾರೆ. ಮೂವರಲ್ಲಿ ಬಳ್ಳಾರಿ ಹಾಗೂ ಚಿತ್ರದುರ್ಗದ ಮೂಲದ ವ್ಯಕ್ತಿಯನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಅದಕ್ಕೂ ಮುನ್ನ ಅರೆಸ್ಟ್ ಆದವರ ಕುಟುಂಬದವರು ರಮ್ಯಾ ಅವರಿಗೆ ಕ್ಷಮೆ ಕೇಳಿದ್ದಾರೆ. ರಮ್ಯಾ ಈ ಕ್ಷಮೆಯ ಅಕೌಂಟ್ ಗಳನ್ನ ರಮ್ಯಾ ಅವರು ಪೊಲೀಸರಿಗೆ ನೀಡಿದ್ದರು. ಅದರ ಆಧಾರದ ಮೇಲೆ ವಶಕ್ಕೆ ಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks