Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟ, ಡಿಸೆಂಬರ್ 8 ರಿಂದ ಅಧಿಸೂಚನೆ

Facebook
Twitter
Telegram
WhatsApp

ಚಿತ್ರದುರ್ಗ, (ಡಿಸೆಂಬರ್.03) : ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಡಿಸೆಂಬರ್ 8 ರಿಂದ ಅಧಿಸೂಚನೆ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 8 ರಿಂದ 15 ರ ವರೆಗೆ ಇರುತ್ತದೆ. ಡಿಸೆಂಬರ್ 16 ರಂದು ನಾಮಪತ್ರಗಳ ಪರಿಶೀಲನೆ, ಡಿಸೆಂಬರ್ 18 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮತದಾನವು ಡಿಸೆಂಬರ್ 27 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು ಮತ ಎಣಿಕೆಯು ಡಿಸೆಂಬರ್ 30 ರಂದು ಬೆಳಗ್ಗೆ 8 ರಿಂದ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ 16 ವಾರ್ಡ್‍ಗಳಿದ್ದು ಮೀಸಲಾತಿಯನ್ವಯ ಈ ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ.

ವಾರ್ಡ್ ನಂಬರ್ 1 ಜಾಗನೂರಹಟ್ಟಿ ಪ.ಜಾತಿ, ವಾರ್ಡ್ ಸಂಖ್ಯೆ 2.ಮಾದಯ್ಯನಹಟ್ಟಿ, ಕಾವಲು ಬಸವೇಶ್ವರ ನಗರ ಜಾಗನೂರಹಟ್ಟಿ ಗ್ರಾಮದ ಸ್ವಲ್ಪ ಭಾಗ ಸಾಮಾನ್ಯ,
ವಾರ್ಡ್ 3. ಚನ್ನಬಸಯ್ಯನಹಟ್ಟಿಯ ಹಳೆಊರು ಗಂಯ್ಯನಹಟ್ಟಿ ಸಾಮಾನ್ಯ,
ವಾರ್ಡ್ 4. ಚನ್ನಬಸವಯ್ಯನಹಟ್ಟಿಯ ಹೊಸ ಊರು ಕೊಂಡಯ್ಯನಕಪಿಲೆ ಪ.ಜಾತಿ ಮಹಿಳೆ,
ವಾರ್ಡ್ 5. ನಾಯಕನಹಟ್ಟಿ-1 ಪ.ಪಂಗಡ ಮಹಿಳೆ, ವಾರ್ಡ್.6 ನಾಯಕನಹಟ್ಟಿ-2 ಪ.ಪಂಗಡ ಮಹಿಳೆ, ವಾರ್ಡ್.7 ನಾಯಕನಹಟ್ಟಿ-3 ಸಾಮಾನ್ಯ,
ವಾರ್ಡ್.8 ನಾಯಕನಹಟ್ಟಿ-4 ಸಾಮಾನ್ಯ ಮಹಿಳೆ, ವಾರ್ಡ್.9 ನಾಯಕನಹಟ್ಟಿ-5 ಸಾಮಾನ್ಯ, ವಾರ್ಡ್.10 ನಾಯಕನಹಟ್ಟಿ-6 ಸಾಮಾನ್ಯ ಮಹಿಳೆ, ವಾರ್ಡ್.11 ನಾಯಕನಹಟ್ಟಿ-7 ಪ.ಪಂಗಡ ಮಹಿಳೆ, ವಾರ್ಡ್.12 ನಾಯಕನಹಟ್ಟಿ-8 ಪ.ಪಂಗಡ, ವಾರ್ಡ್ ಸಂಖ್ಯೆ.13 ನಾಯಕನಹಟ್ಟಿ-9 ಸಾಮಾನ್ಯ ಮಹಿಳೆ, ವಾರ್ಡ್.14 ನಾಯಕನಹಟ್ಟಿ-10 ಪ.ಪಂಗಡ, ವಾರ್ಡ್.15 ಬೋಸೇದೇವರಹಟ್ಟಿ-1 ಸಾಮಾನ್ಯ ಮಹಿಳೆ ಹಾಗೂ
ವಾರ್ಡ್ ಸಂಖ್ಯೆ.16 ರಲ್ಲಿ ಬೋಸೇದೇವರಹಟ್ಟಿ-2 ಪ.ಪಂಗಡಕ್ಕೆ ಮೀಸಲಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!