Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ನೆರಲಗುಂಟೆ ಎಂ.ರಾಮಪ್ಪ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಕರ್ನಾಟಕ ಸರ್ಕಾರ ಭೋವಿ ನಿಗಮದ ನೂತನ ಅಧ್ಯಕ್ಷ ನೆರಲಗುಂಟೆ ಎಂ.ರಾಮಪ್ಪ ಅವರು ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದರ್ಶನಾಶೀರ್ವಾದ ಪಡೆದರು.

ಕಛೇರಿ ಕೆಲಸದ ಜೊತೆಜೊತೆಯಲ್ಲಿ ರಾಜ್ಯಾಪ್ರವಾಸ ಮಾಡಿ ಜನರ ಜೀವನ ಸ್ಥಿತಿಗತಿಯನ್ನು ಕುದ್ದಾಗಿ ಅರ್ಥೈಸಿಕೊಂಡು ಜನರಿಗೆ ಸಹಾಯ ಸ್ಪಂದನೆ ಸಹಕಾರ ಮಾಡಿ ಎಂದು ಶ್ರೀಗಳು ರಾಮಪ್ಪರವರಿಗೆ ಮಾರ್ಗದರ್ಶನ ಮಾಡಿದರು.

ಜನರಿಗೆ ಸ್ಪಂದಿಸುವ ಮನೋಭಾವದೊಂದಿಗೆ ಪಕ್ಷಕ್ಕೆ ಶಕ್ತಿತುಂಬುವ ಕಾರ್ಯನ್ಮೂಖಗೊಳ್ಳುವೆ. ಸರ್ಕಾರ ನೀಡುವ ಯೇಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಂಡೆ ರುದ್ರಪ್ಪ, ಚಲನಚಿತ್ರ ನಿರ್ಮಾಪಕ ಆನಂದಪ್ಪ, ಡಿ.ಸಿ.ಮೋಹನ, ಈ ಮಂಜುನಾಥ, ವಡ್ಡರ ಸಿದ್ಧವನಹಳ್ಳಿ ಪ್ರಕಾಶ,ಟಿ. ನಾಗೇಂದ್ರಪ್ಪ, ಅಂಜಿನಪ್ಪ, ವೆಂಕಟಪ್ಪ, ಶಿವಮೊಗ್ಗ ಧೀರರಾಜು, ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸಮನಿ, ನಿರಂಜನ, ಎಬಿವಿಪಿ ಚಂದ್ರಶೇಖರ, ಹಿರಿಯೂರು ಚಂದ್ರಶೇಖರ, ಚಳ್ಳಕೆರೆ ವೆಂಕಟಪ್ಪ, ನಿವೃತ್ತ ಇಂಜಿನಿಯರ್ ಗೋಪಾಲ, ಕನಕದಾಸ, ಎ ಅನಿಲ್ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now