ದಾವಣಗೆರೆ: ಉಪಚುನಾವಣೆಯ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಮನೆಯಲ್ಲಿ ಯಾರಾದ್ರೂ ಚುನಾವಣೆಗೆ ನಿಂತರೆ ಮನೆಯವರೆಲ್ಲ ಸೇರಿ ಅವರೊಟ್ಟಿಗೆ ಪ್ರಚಾರ ಮಾಡಿ, ನಮ್ಮವರಿಗೆ ಮತ ಹಾಕಿ ಅಂತ ಕೇಳುವುದು ಸರ್ವೇ ಸಾಮಾನ್ಯ. ಅದೇ ಥರ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರ ಪತ್ನಿ ಮತಯಾಚನೆ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮುಸ್ಲಿಮರ ಮತಗಳು ಕೂಡ ಹೆಚ್ಚಾಗಿನೆ ಇದಾವೆ. ಅದೇ ಕಾರಣಕ್ಕೆ ಸಚಿವ ಜಮೀರ್ ಅಹ್ಮದ್ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎಂದು ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಇದರ ನಡುವೆ ಮುಸ್ಲಿಂ ಸಮುದಾಯದವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸದ್ಯ ಎರಡು ಪಕ್ಷಗಳು ಮತಯಾಚನೆ ಮಾಡುತ್ತಿವೆ. ಇದರಲ್ಲಿ ಗಮನ ಸೆಳೆದದ್ದು ಶ್ರೀನಿವಾಸ್ ಅವರ ಪತ್ನಿ ಸಂದ್ಯಾ. ಮುಸ್ಲಿಂ ಮನೆಗಳಿಗೆ ಮತಯಾಚನೆಗೆಂದು ಹೋದಾಗ ಅಲ್ಲಿ, ಸಂಧ್ಯಾ ಅವರಿಗೆ ಉಡಿ ತುಂಬಿ ಕಳುಹಿಸಿದ್ದಾರೆ. ಸಂಧ್ಯಾ ಅವರು ಬಳಿಕ ಮುಸ್ಲಿಂ ಮಹಿಳೆಯರ ಕಾಲಿಗೆಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದೆ ಇರುವುದೇ ಬಿಜೆಪಿಗರಿಗೆ ಒಂದು ಅಸ್ತ್ರವಾಗಿದೆ. ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಕಾಂಗ್ರೆಸ್, ಮುಸ್ಲಿಮರ ಮತ ಹಾಕಿಸಿಕೊಂಡು ಮೋಸ ಮಾಡಿದೆ. ಈ ಬಾರಿ ನಮಗೆ ಮತ ನೀಡಿ, ನಮ್ಮಲ್ಲಿ ಮೋಸ ಇಲ್ಲ. ನಮ್ಮ ಮನೆ ಬಳಿ ಯಾವಾಗ ಬೇಕಾದರೂ ಬನ್ನಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಮತಯಾಚನೆ ವೇಳೆ ಸಂಧ್ಯಾ ಶ್ರೀನಿವಾಸ್ ಭರವಸೆಯನ್ನು ನೀಡಿದ್ದಾರೆ. ಮನೆಗೆ ಬಂದವರಿಗೆ ಮಡಿಲು ತುಂಬಿ, ಮುಸ್ಲಿಂ ಕುಟುಂಬದವರು ಖುಷಿ ಪಟ್ಟಿದ್ದಾರೆ.














