ಮುನಿರತ್ನ ಕಚೇರಿಗೆ ಬೀಗ : ಕುಸುಮಾ ಮೇಲೆ ಹರಿಹಾಯ್ದ ಶಾಸಕ

1 Min Read

ಬೆಂಗಳೂರು: ಇಂದು ಶಾಸಕ ಮುನಿರತ್ನ ಅವರ ಎಂಎಲ್ಎ ಕಚೇರಿಗೆ ಬೀಗ ಜಡಿದಿದ್ದಾರೆ. ಈ ಬಗ್ಗೆ ಮುನಿರತ್ನ ಆಕ್ರೋಶ ಹೊರ ಹಾಕಿದ್ದು, ಇದು ಎಂಎಲ್ಎ ಆಫೀಸ್. ಅದರೊಳಗೆ ಪಟಾಕಿ ಇದೆ, ನೋಡಬೇಕು ಅಂತ ಹೇಳಿ ಬೀಗ ಹೊಡಿತೀನಿ ಅಂತಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನ ಹೊತ್ತು ಬರುವವರಿಗೆ ಅನುಕೂಲವಾಗಲಿ ಅಂತ ಮಾಡಿರುವ ಆಫೀಸ್. ದೌರ್ಜನ್ಯ ಬಹಳ ಮಿತಿಮೀರಿ ಹೋಗಿದೆ. ಎಲ್ಲದಕ್ಕಿಂತ ತೊಂದರೆ ಅನುಭವಿಸುವವರು ಯಾರಿದ್ದಾರೆ ಅಂದ್ರೆ ಅದು ಲಕ್ಷ್ಮೀದೇವಿ ನಗರದ ಜನತೆ ಎಂದಿದ್ದಾರೆ.

ಪಟಾಕಿ ಹಂಚಬಾರದು ಎಂದು ಹೀಗೆ ಮಾಡಿದ್ದಾರೆ. ಈಗ ಬಿಲ್ ತಗೊಂಡು ಕಾನೂನು ಬದ್ಧವಾಗಿ, ಪೊಲೀಸರಿಗೆ ಒಂದು ಲೀಸ್ಟ್ ಕೊಟ್ಟು, ಇಂಥ ಮನೆಗೆ ಇಂಥವರು ಕೊಡ್ತಾರೆ. ನೀವ್ ಬೇಕಾದ್ರೆ ಪರಿಶೀಲನೆ ನಡೆಸಿ ಅಂತ ಹೇಳೋಣಾ ಅಂತ ಇದ್ದೀನಿ. ಪಟಾಕಿ ಬೇಕಾದವರಯ ಬಂದು ತೆಗೆದುಕೊಂಡು ಹೋಗ್ತಾರೆ ಎಂದಿದ್ದಾರೆ.

ಇದೇ ವೇಳೆ ಕುಸುಮಾ ಮೇಲೆ ಹೌಹಾರಿದ ಮುನಿರತ್ನ, ಡಿಕೆ ರವಿ ಸತ್ತಾಗ ವಿಧಾನಸೌಧದ ಬಳಿ ಕೂತ್ಕೊಂಡು, ಅಪ್ಪ – ಮಗಳು ತಲೆ ಹೊಡ್ಕೊಂಡು, ಬಾಯಿ ಬಡ್ಕಂಡು ನನ್ನ ಗಂಡನ್ನ ಕೊಂದು ಬಿಟ್ರು ಅಂತ ಹೇಳಿ, ಗಲಾಟೆ ಮಾಡಿ, ಜಾರ್ಜ್ ರಾಜೀನಾಮೆ ಕೊಡ್ಸಿ, ತನಿಖೆಗೆ ಕೊಡ್ಸಿ, ಸಿದ್ದರಾಮಯ್ಯ ಅವರ ಜೊತೆಗೆ ನಾನೇ ಇದ್ದೀನಿ ಅವತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾನೇ ನೋಡ್ಕೊಂಡ್ ಬಂದಿದ್ದೀನಿ. ರಿಪೋರ್ಟ್ ತಿರುಚುಬಿಟ್ಟರು ಅಂತ ಹೇಳಿದ್ರು. ಕಾಂಗ್ರೆಸ್ ಪಾರ್ಟಿ ಮೇಲೆ ಅಷ್ಟೆಲ್ಲ ಗಲಾಟೆ ಮಾಡಿದ್ರು. ಆಮೇಲೆ ಏನಾಯ್ತು ಅಪ್ಪ ಕಾಂಗ್ರೆಸ್ ಪಾರ್ಟಿಯಲ್ಲಿ ಚೇರ್ಮನ್, ಈಗ ಮಗಳು ಎಂಎಲ್ಎ ಮಾಡೋಕೆ ಹೊರಟವರೆ ಅಂತ ಕಿಡಿಕಾರಿದ್ದಾರೆ.

Share This Article
Enable Notifications OK No thanks