Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾ ಸ್ವಾಮಿ ಸಾವಿನಿಂದ ತಾಯಿ ಕಣ್ಣೀರು : ದರ್ಶನ್, ಪವಿತ್ರಾಗೆ ಆಕ್ರೋಶದ ಬೈಗುಳ..!

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂ. 12 : ಅಶ್ಲೀಲ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಕೊಲೆಯಾದ ರೇಣುಕಾಸ್ವಾಮಿ ತಾಯಿ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಈ ನೋವಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡಗೆ ಹಿಡಿ ಶಾಪ ಹಾಕಿದ್ದಾರೆ. ಮನೆಗೆ ಮಗನೇ ಆಧಾರ ಸ್ತಂಭವಾಗಿದ್ದ. ಅವನೇ ಇಲ್ಲವೆಂದರೆ ನಾವೂ ಈಗ ಏನು ಮಾಡುವುದು. ಅವನು ಮಗುವನ್ನು ನೋಡುವುದಕ್ಕೆ ಆಗಲಿಲ್ಲ. ಈಗ ಸೊಸೆಯ ಮುಂದಿನ ಜೀವನ ಹೇಗೆ ಎಂದು ಪ್ರಶ್ನಿಸಿದ್ದಾರೆ.

ದರ್ಶನ್ ಒಬ್ಬ ಕಟುಕನಾಗಿ ಈ ರೀತಿ ಮಾಡಿದ್ದಾನೆ. ಆ ಸಮಯದಲ್ಲಿ ನನ್ನ ಮಗ ರಿಕ್ವೆಸ್ಟ್ ಮಾಡಿಕೊಂಡಿದ್ದನಂತೆ. ತಪ್ಪು ಮಾಡಿದ್ದೀನಿ. ಬಿಟ್ಟು ಬಿಡಿ. ನನ್ನ ಹೆಂಡತಿ ಬಸುರಿ ಇದ್ದಾಳೆ ಅಣ್ಣ ಅಂತ ರೇಣುಕಾ ಬೇಡಿಕೊಂಡಿದ್ದನಂತೆ. ಮಗ ಅಷ್ಟೆಲ್ಲಾ ಕೇಳಿಕೊಂಡರು ಬಿಡದೆ ಈ ರೀತಿ ಕೊಲೆ ಮಾಡಿದ್ದಾರಲ್ಲ, ದರ್ಶನ್ ಇನ್ನೆಂಥಾ ನೀಚ ಇರಬಹುದು. ದರ್ಶನ್ ನಾಯಕ ಅಲ್ಲ, ಖಳನಾಯಕ. ಅವನಿಗೆ ಮೆಟ್ಟು ತೆಗೆದುಕೊಂಡು ಹೊಡೆಯಬೇಕು. ದರ್ಶನ್ ಕಂಡಲ್ಲೇ ಶೂಟ್ ಮಾಡಬೇಕು. ಈ ಸಾವಿಗೆ ಮುಖ್ಯ‌ ಕಾರಣ ದರ್ಶನ್ ಹಾಗೂ ಪವಿತ್ರಾ ಗೌಡ.

ಪವಿತ್ರಾ ಗೌಡಗೆ ಬೇರೆ ಬೇರೆಯವರು ಕೂಡ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಅವರನ್ನೆಲ್ಲಾ ಬಿಟ್ಟು ನನ್ನ ಮಗನನ್ನು ಮಾತ್ರ ಹೊಡರದು ಸಾಯಿಸಿದ್ದಾನಲ್ಲ. ಅವಳು ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನವನ್ನು ಹಾಳು ಮಾಡಿದ್ದಾಳೆ. ಅವಳು ಮನುಷ್ಯಳಾ..? ಇಟ್ಟುಕೊಂಡವಳು ಇರುವ ತನಕ ಕಟ್ಟುಕೊಂಎವಳು ಕಡೆಯ ತನಕ. ಇಟ್ಟುಕೊಂಡವಳೇ ಇಷ್ಟೊಂದು ಸೊಕ್ಕಿನಿಂದ ಇದ್ದಾಳೆ. ನನ್ನ ಮಗನನ್ನು ಸಾಯಿಸಿದ್ದಾರಲ್ಲ, ವಾಪಸ್ ತಂದು ಕೊಡುವುದಕ್ಕೆ ಸಾಧ್ಯವಾಗುತ್ತದಾ..? ಅವನು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೋ ಬಿಟ್ಟಿದ್ದಾನೋ, ಮಗನನ್ನು ಕರೆದು ಎಚ್ವರಿಕೆ ಕೊಟ್ಟು ಬಿಡಬಹುದಿತ್ತು. ಬೇಡಿಕೊಂಡರು ಬಿಟ್ಟಿಲ್ಲ ಅಂದ್ಋ ಎಂಥಹ ಕಟುಕರಿರಬಹುದು ಎಂದು ಕಣ್ಣೀರು ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...