ಬೆಂಗಳೂರು: ಮೂಡಾ ಹಗರಣದ ವಿಚಾರ ಇತ್ತೀಚೆಗೆ ಕೊಂಚ ಕಡಿಮೆಯಾಗಿತ್ತು. ಇದೀಗ ಈ ಕೇಸ್ ಸಂಬಂಧ ಸಿದ್ದರಾಮಯ್ಯ ಅವರ ಪತ್ನಿಗೆ ನೋಟೀಸ್ ಜಾರಿಗೊಳಿಸವಂತೆ ಹೈಕೋರ್ಟ್ ಆದೇಶ ನೀಡಿದೆ. ಸಿದ್ದರಾಮಯ್ಯ ಅವರ ಪತ್ನಿಗೆ ನೋಟೀಸ್ ಜಾರಿಯಾಗದ ಹಿನ್ನೆಲೆ ನೋಟೀಸ್ ಜಾರಿಗೊಳಿಸುವಂತೆ ಹೈಕೋರ್ಟ್ ಆದೇಶ ಹೊರೆಇಸಿದೆ. ನೋಟೀಸ್ ಜಾರಿಯಾಗ್ ಪ್ರತಿವಾದಿಗಳಿಗೆ ನೋಟೀಸ್ ನೀಡಲು ನ್ಯಾ.ವಿ.ಕಾಮೇಶ್ವರ ರಾವ್ ಹಾಗೂ ಸಿ.ಎಂ. ಜೋಶಿ ಅವರಿದ್ದ ಪೀಠ ಸೂಚನೆ ನೀಡಿದೆ. ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 4 ಕ್ಕೆ ಮುಂದೂಡಿಕೆ ಮಾಡಿದೆ.
ಮೂಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶಗಳನ್ನು ಹಂಚಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ನಡೆದಿದೆ. ಮೂಡಾ ಹಗರಣ ರಾಜ್ಯ ರಾಜಕೀಯದಲ್ಲಿಯೇ ದೊಡ್ಡ ತಲ್ಲಣವನ್ನು ಸೃಷ್ಟಿ ಮಾಡಿತ್ತು.
ಸುಮಾರು 45 ವರ್ಷದ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರು ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ರಾಜಕೀಯ ಜೀವನವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಅದ್ಯಾವಾಗ ಮೂಢಾ ಹಗರಣ ಬೆಳಕಿಗೆ ಬಂತೋ ಅಲ್ಲಿಂದ ಅವರ ರಾಜಕೀಯ ಭವಿಷ್ಯವನ್ನೆರ ಉಲ್ಟಾ ಮಾಡುವ ತನಕವೂ ಚರ್ಚೆಯಾಗಿತ್ತು. ಇನ್ನೇನು ಅವರ ಸಿಎಂ ಖುರ್ಚಿಗೂ ಕಂಟಕ ಬರುತ್ತೆ ಎಂಬ ಲೆವೆಲ್ ಗೆ ಹೋಗಿತ್ತು. ಆ ಬಳಿಕ ತಣ್ಣಗಾಗಿತ್ತು. ಆದರೆ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಮೂಢಾ ಹಗರಣ ಸದ್ದು ಮಾಡಿತ್ತು. ಈಗ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗು ನೋಟೀಸ್ ನೀಡುವಂತೆ ಕೋರ್ಟ್ ಆದೇಶ ನೀಡಿದೆ.













