ಬೆಂಗಳೂರು: ಮೂಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಜೆಪಿ ನಾಯಕರು ಈ ಸಂಬಂಧ ದೊಡ್ಡ ಹೋರಾಟವನ್ನೇ ಮಾಡಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈಗ ಪಾರ್ವತಿ ಅವರಿಗೆ ರಿಲೀಫ್ ಸಿಕ್ಕಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಮೂಡಾ ಹಗರಣದ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳ ಕುಟುಂಬ ಹಾಗೇ ಬೇರೆ ವ್ಯಕ್ತಿಗಳು ಇನ್ವಾಲ್ ಆಗಿರುವುದು ಎದ್ದು ಕಾಣಿಸ್ತಾ ಇದೆ. ಇವತ್ತು ಕೇವಲ ಇಡಿ ತನಿಖೆ ಮಾಡದೆ ಇರುವುದಕ್ಕೆ ತಡೆ ಸಿಕ್ಕಿರುವುದು. ಇಡಿ ತನಿಖೆಗೆ ತಡೆ ಸಿಕ್ಕಿಬಿಟ್ಟರೆ ಕ್ಲೀನ್ ಚಿಟ್ ಸಿಕ್ಕಂತೆ ಆಗುತ್ತಾ..? ಲೋಕಾಯುಕ್ತ ಪೂರ್ತಿ ತನಿಖೆ ಆಗಲಿ ಅಂತ ಕಾಯ್ತಾ ಇದ್ದಾರೆ. ಇದು ಬಹಳ ಅಗಾಧವಾದ ಕೇಸ್. ಇದು ತುಂಬಾ ಚಿಕ್ಕ ಕೇಸ್. ತನಿಖೆ ಮಾಡಿದರೆ ಎಲ್ಲಾ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ.
ಐಸೋಲೇಟೆಡ್ ಕೇಸಲ್ಲಿ ಇಡಿ ಅನ್ನೋದು ಸಣ್ಣ ಭಾಗ. ಹಣ ಬದಲಾವಣೆ ಬಗ್ಗೆ ಇಡಿ ತನಿಖೆ ಮಾಡಬೇಕು ಅಙತ ಹೊರಟಿತ್ತು. ಆದರೆ ಅದಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ನಂಗೆ ಸಂಪೂರ್ಣ ನಂಬಿಕೆ ಇದೆ. ಈ ಕೇಸಲ್ಲಿ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇವರು ಹಗರಣ ಮಾಡಿಲ್ಲ ಅಂತ ಇಲ್ಲ. ಬಹಳ ಸ್ಪಷ್ಟವಾಗಿ ಕಾಣಿಸ್ತಾ ಇದೆ ಹಗರಣ ಆಗಿರುವುದು. ತನಿಖೆ ಆದ ನಂತರ ಕೋರ್ಟ್ ವಿಚಾರಣೆ ನಡೆಯುತ್ತೆ. ತೃಪ್ತಿಕರವಾಗಿದೆಯಾ ಇಲ್ವಾ ಅಂತ ನೋಡಿಕೊಂಡು ಹೋರಾಟದ ಬಗ್ಗೆ ಯೋಚನೆ ಮಾಡ್ತೀವಿ ಎಂಬ ರೀತಿಯಾಗಿ ಮತ್ತೆ ಹೋರಾಟ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.




