ಸಿದ್ದರೂಢ ಆಶ್ರಮದಲ್ಲಿ ಒಂದೇ ತಿಂಗಳಲ್ಲಿ 27.13 ಲಕ್ಷ ಸಂಗ್ರಹ

suddionenews
1 Min Read

ಹುಬ್ಬಳ್ಳಿ: ಸಿದ್ದರೂಢಾಶ್ರಮ ಎಂದರೆ ಉತ್ತರ ಕರ್ನಾಟಕದ ಪ್ರಸಿದ್ಧ ಮಠ. ಹುಬ್ಬಳ್ಳಿ ಧಾರಾವಾಡ ಜನರ ಆರಾಧ್ಯಧೈವ ಕೂಡ. ಅಷ್ಟೇ ಅಲ್ಲ ಇಲ್ಲಿಗೆ ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರುತ್ತಾರೆ. ಸಿದ್ಧರೂಢನ ದರ್ಶನ ಪಡೆಯುತ್ತಾರೆ. ಇದೀಗ ದೇವರ ಹುಂಡಿ ಸಂಗ್ರಹದಲ್ಲಿ ದಾಖಲೆಮಟ್ಟದಲ್ಲಿ ಕಾಣಿಕೆ ಸಂಗ್ರಹವಾಗಿದೆ.

ಒಂದೇ ತಿಂಗಳಲ್ಲಿ 27.13 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಬ್ಯಾಂಕ್ ಇಂಡಿಯಾ ಮತ್ತು ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಭಕ್ತರ ಸಮೂಹದಲ್ಲಿ ಕಾಣಿಕೆ ಸಂಗ್ರಹದ ಹುಂಡಿ ತೆರೆದು, ಎಣಿಕೆ ಮಾಡಿದ್ದಾರೆ. ಈ ವೇಳೆ ಟ್ರಸ್ಟ್ ಕಮಿಟಿಯ ಚೇರ್ಮನ್ ಧರಣೇಂದ್ರ, ವೈಸ್ ಚೇರ್ಮನ್ ಡಾ.ಗೋವಿಂದ ಕೂಡ ಉಪಸ್ಥಿತಿಯಲ್ಲಿದ್ದರು.

ಹುಂಡಿ ಸಂಗ್ರಹದಲ್ಲಿ ಒಂದು ತಿಂಗಳಲ್ಲಿ ಸುಮಾರು 27,13 ಲಕ್ಷ ಹಣ ಮತ್ತು 17,711 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಾಗ್ರಿಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *