Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಾಕ್ ಆಟಗಾರನನ್ನ ಬದುಕಿಸಿದ ಭಾರತೀಯ ವೈದ್ಯ : ಖುಷಿಯಲ್ಲಿ ತನ್ನ ಜೆರ್ಸಿ ಗಿಫ್ಟ್ ಕೊಟ್ಟ ರಿಜ್ವಾನ್…!

Facebook
Twitter
Telegram
WhatsApp

ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಇನ್ನೇನು ನಡೆಯಬೇಕು ಎನ್ನುವಾಗ್ಲೇ ಪಾಕಿಸ್ತಾನದ ಆರಂಭಿಕ ಹಾಗೂ ಸ್ಪೋಟಕ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆ ಪಾಕ್ ತಂಡದವರನ್ನ ಆತಂಕಕ್ಕೆ ದೂಡಿತ್ತು. ಆ ಬಳಿಕ ರಿಜ್ವಾನ್ ಅವರನ್ನ ಚಿಕಿತ್ಸೆಗೆಂದು ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ರಿಜ್ವಾನ್ ಅವರಿಗೆ ತೀವ್ರತರನಾದ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಬದುಕಿಸಿದ್ದು, ಭಾರತೀಯ ವೈದ್ಯ ಶಹೀರ್ ಅನ್ನೋದು ಮತ್ತೊಂದು ವಿಚಾರ. ದುಬೈನ ಮೆಡೋರ್ ಆಸ್ಪತ್ರೆಗೆ ದಾಖಲಿಸಿದ ಬಳಿಕ, ಅಲ್ಲಿನ ವೈದ್ಯ ಶಹೀರ್ ಸನಲ್ಬದಿನ್ ರಿಜ್ವಾನ್ ಗೆ ಚಿಕಿತ್ಸೆ ನೀಡಿದ್ದರು. ಐಸಿಯು ನಲ್ಲೇ 36 ಗಂಟೆಗಳ ಕಾಲ ಚಿಕಿತ್ಸೆ ಪಡೆದು ರಿಜ್ವಾನ್ ಚೇತರಿಸಿಕೊಂಡಿದ್ದಾರೆ. ಐಸಿಯುನಲ್ಲಿದ್ದಾಗಲೂ ನಾನು ಪಂದ್ಯವಾಡಬೇಕು ಎಂದು ರಿಜ್ವಾನ್ ಹೇಳುತ್ತಿದ್ದರಂತೆ.

ಈ ಬಗ್ಗೆ ವೈದ್ಯ ಶಹೀರ್ ಮಾಹಿತಿ ಹಂಚಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿದ್ದರು, ನಾನು ಸೆಮಿಫೈನಲ್ ನಲ್ಲಿ ಆಡಲೇಬೇಕು ಎಂಬ ಹುಮ್ಮಸ್ಸು ತೋರಿಸುತ್ತಿದ್ದರು. ಆ ಹುಮ್ಮಸ್ಸಿನಿಂದ ಅವರು ಬೇಗ ಗುಣಮುಖರಾಗಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ಖುಷಿಯಲ್ಲಿ ರಿಜ್ವಾದ್ ಗಿಫ್ಟ್ ವೊಂದನ್ನ ನೀಡಿದ್ದಾರೆ. 16ನೇ ನಂಬರ್ ಜೆರ್ಸಿಯನ್ನ ವೈದ್ಯನಿಗೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!