Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸದನಕ್ಕೆ ಗೈರಾದ ಸಚಿವರು : ಕೋಪದಿಂದ ಹೊರನಡೆದ ವಿಪಕ್ಷ ನಾಯಕರು..!

Facebook
Twitter
Telegram
WhatsApp

 

ಬೆಂಗಳೂರು: ನಿನ್ನೆಯೆಲ್ಲಾ ಸರ್ಕಾರಿ ರಜೆಯಲ್ಲಿದ್ದ ಸಚಿವರು, ಶಾಸಕರು ಇಂದು ಅಧಿವೇಶನ ಇರುವುದನ್ನೇ ಮರೆತು ಹೋಗಿದ್ದಾರಾ ಅಂತ. ಆಡಳಿತ ಪಕ್ಷದ ನಾಯಕರು ಅಧಿವೇಶನಕ್ಕೆ ಬಾರದೆ ಇದ್ದ ಕಾರಣ ವಿಪಕ್ಷ ನಾಯಕರು ಸದನದಲ್ಲಿ ಸದ್ದು ಗದ್ದಲ ಮಾಡಿದ್ದಾರೆ. ಆರ್.ಅಶೋಕ್ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಭಾಧ್ಯಕ್ಷರೆ ಅಧಿವೇಶನಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೀರಿ. ತಿಂಡಿ-ಊಟದ ವ್ಯವಸ್ಥೆ ಮಾಡಿದ್ದೀರಿ. ಆದರೆ ಆಡಳಿತ ಪಕ್ಷದ ನಾಯಕರುಗಳೇ ಬಂದಿಲ್ಲವಲ್ಲ. ಸಭಾಧ್ಯಕ್ಷರೇ ಈ ಥರ ಆಡಳಿತ ಪಕ್ಷದ ನಾಯಕರ ನಡೆಯಿಂದ ಬೇಸತ್ತು, ಒಂದು ಸದನ ನಡೆಯಬೇಕು ಅಂದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದೀರಿ. ಇವರಿಗೆ ಏನು ದಾಡಿಯಾಗಿದೆ. ದಯವಿಟ್ಟು ಈ ರೀತಿಯ ಬೇಜಾಬ್ದಾರಿ ಹೇಳಿಕೆಯನ್ನು ನೀಡಬೇಡಿ. ನಾವೂ ಪ್ರತಿಭಟನೆ ಮಾಡಿ ಹೊರಗೆ ಹೋಗ್ತಾ ಇದ್ದೀವಿ ಎಂದು ಧಿಕ್ಕಾರ ಕೂಗುತ್ತಾ ವಿಪಕ್ಷ ನಾಯಕರು ಸದನದಿಂದ ಹೊರ ನಡೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಧಿಕ್ಕಾರ ಅಂತ ಕೂಗುತ್ತಾ ಹೊರ ನಡೆದಿದ್ದಾರೆ. ಸಚಿವರಿಗೂ ಧಿಕ್ಕಾರ ಕೂಗಿ ಹೊರ ನಡೆದಿದ್ದಾರೆ.

ಅತ್ತ ಯುಟಿ ಖಾದರ್ ಅವರು ತಡೆಯುವುದಕ್ಕೆ ಪ್ರಯತ್ನ ಮಾಡಿದರು. ಅತ್ತ ಹಾಜರಾಗಿದ್ದ ಸಚಿವರು ಅವರಿಗೆ ಸದನ ನಡೆಸುವುದು ಇಷ್ಟವಿಲ್ಲ. ಸಭಾಧ್ಯಕ್ಷರೇ ನೀವೂ ಪ್ರಶ್ನೋತ್ತರ ಪ್ರಾರಂಭ ಮಾಡಿ ಎಂದಿದ್ದಾರೆ. ಇಂದು ನಡೆಯಬೇಕಿದ್ದ ಪ್ರಶ್ನೊತ್ತರ ಚಟುವಟಿಕೆಯನ್ನು ಕೇಳಿಸಿಕೊಳ್ಳದೆ ವಿಪಕ್ಷ ನಾಯಕರು ಹೊರನಡೆದರು.

ಈ ವೇಳೆ ಯುಟಿ ಖಾದರ್ ಕೂಡ ಆಡಳಿತ ಪಕ್ಷದ ನಾಯಕರಿಗೆ ಕ್ಲಾಸ್ ತೆಗೆದುಕೊಂಡರು. ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ ಎಂದರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸದನಕ್ಕೆ ಬಾರದೆ ಎಲ್ಲಿ ಹೋದರು ಎಂದು ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

Mobile phone : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇಲ್ಲಿದೆ ಸ್ಪಷ್ಟತೆ..!

  ಸುದ್ದಿಒನ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ

error: Content is protected !!