ಶಾಲಾ ಕಟ್ಟಡ ಉದ್ಘಾಟಿಸಲು ಕಚ್ಚಾಡಿದ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಛೇಗೌಡ..!

suddionenews
1 Min Read

ಹೊಸಕೋಟೆ: ಜನಪ್ರತಿನಿಧಿಗಳು ಎಂದರೆ ಒಂದರ್ಥದಲ್ಲಿ ಮಾದರಿಯಾಗಿಯೇ ಇರಬೇಕು. ಆದ್ರೆ ಇವರುಗಳೇ ಚಿಕ್ಕಮಕ್ಕಳಂತೆ ಕಚ್ಚಾಡಿದರೆ ನೋಡುವ ಜನರಿಗೆ ಹೇಗನ್ನಿಸಬೇಡ. ಅಂತದ್ದೆ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಅದು ಕಟ್ಟಡವೊಂದರ ಉದ್ಘಾಟನೆಗಾಗಿ ನಡೆದ ಗಲಾಟೆಯಿದು.

ಮುತ್ಸಂದ್ರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಇಂದು ನೆರವೇರಿತ್ತು. ಆ ಕಟ್ಟಡ ಉದ್ಘಾಟನೆಗೆ ಸಚಿವರು ಶಾಸಕರನ್ನು ಕರೆಸಲಾಗಿತ್ತು. ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಟೇಪ್ ನಾನೇ ಕಟ್ ಮಾಡ್ಬೇಕು ಎನ್ನುತ್ತಿರುವಾಗಲೇ ಶಾಸಕ ಶರತ್ ಬಚ್ಚೇಗೌಡ ಅವರು ತಟ್ಟೆಯಲ್ಲಿದ್ದ ಕತ್ತರಿ ಎತ್ತಿಕೊಂಡು ಟೇಪ್ ಕಟ್ ಮಾಡಿದರು.

ಇದು ಸಾಮಾನ್ಯವಾಗಿಯೇ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಕೋಪ ತರಿಸಿದೆ. ಎಲ್ಲವನ್ನು ಸಹಿಸಿಕೊಂಡು ಕಟ್ಟಡದ ಒಳಗೆ ಹೋಗಿದ್ದಾರೆ. ಒಳಗಡೆ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಜಗಳ ಶುರುವಾಗಿದೆ. ಇಬ್ಬರ ನಡುವಿನ ಜಗಳ ನೋಡುತ್ತಾ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ. ಈ ಜಗಳ ನೋಡಿ ಸಾಮಾನ್ಯ ಜನ ಇವ್ರೆಲ್ಲ ಜನಪ್ರತಿನಿಧಿಗಳ ಎಂಬ ಪ್ರಶ್ನೆಯನ್ನ ತಮ್ಮಲ್ಲೆ ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *