ಜನಾರ್ದನ ರೆಡ್ಡಿಯಿಂದ ಗಣಿ ಅತಿಕ್ರಮಣ ಸಾಬೀತು..!

1 Min Read

ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿಗೆ ಗಣಿಗಾರಿಕೆಯಿಂದ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಣಿ ಒತ್ತುವರಿ ಹಾಗೂ ಸರ್ಕಾರಿ ಜಾಗದಲ್ಲಿ ಒತ್ತುವರಿ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಧಾಂಶು ದುಲಿಯಾ ವರದಿಯಲ್ಲಿ ನೇಮಕ ಮಾಡಲಾಗಿದೆ. ಸುಧಾಂಶು ದುಲಿಯಾ ನೇತೃತ್ವದ ತಂಡ ಮಾಡಿದ್ದ ಸರ್ವೇಯಲ್ಲಿ ಅಕ್ರಮ ಸಾಬೀತಾಗಿದೆ.

ಅದರಲ್ಲೂ ಗಡಿಯಲ್ಲಿರುವ ಸುಂಕಲಮ್ಮ ದೇವಸ್ಥಾನದ ಬಳಿ ಅಕ್ರಮ ಮೈನಿಂಗ್ ಮಾಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಜನಾರ್ದನ ರೆಡ್ಡಿ ಒಡೆತನದ ಗಣಿ ಕಂಪನಿಗಳು ಕರ್ನಾಟಕದ ಗಡಿ ಒತ್ತುವರಿ ಮಾಡಿದ್ದಕ್ಕೆ ಸರ್ವೇ ತಂಡ ಸಾಕ್ಷಿ ನೀಡಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನಲೆಯಲ್ಲಿ ಆಂಧ್ರದ ಗಡಿ ಭಾಗದಲ್ಲಿರುವ ಜನಾರ್ದನ ರೆಡ್ಡಿ ಒಡೆತನದ ನಾಲ್ಕು ಗಣಿ ಕಂಪನಿ ಸೇರಿ ಒಟ್ಟು ಆರು ಗಣಿ ಕಂಪನಿಯ ವಿರುದ್ಧ ಕಳೆದ ತಿಂಗಳು ಸರ್ವೇ ಮಾಡಲಾಗಿತ್ತು.

ಸರ್ವೇ ಮಾಡಿದ ನಕ್ಷೆ ಮತ್ತು ಸುಂಕಲಮ್ಮ ದೇವಸ್ಥಾನವಿದ್ದ ಸ್ಥಳದ ನಕ್ಷೆಯ ಪ್ರತಿ ಲಭ್ಯವಾಗಿದೆ. ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ, ಪರಿಸರದ ಮೇಲಾದ ಪರಿಣಾಮ ಮತ್ತು ಕರ್ನಾಟಕ ಆಂಧ್ರದ ಪರ್ಮಿಟ್ ದುರ್ಬಳಕೆ ಬಗ್ಗೆ ತನಿಖೆ ನಡೆಸಿತ್ತು. ಡ್ರೋಣ್ ಸರ್ವೇ ಸೇರಿದಂತೆ ಅತ್ಯಾಧುನಿಕ ಮಾದರಿಯಲ್ಲಿ ಸರ್ವೇ ಕಾರ್ಯ ಮಾಡಲಾಗಿತ್ತು. ಈ ವರದಿಯನ್ನು ಜನವರಿ ಕೊನೆ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಲಾಗುತ್ತದೆ. ಆ ಕಾರಣಕ್ಕೆ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

Share This Article
Enable Notifications OK No thanks