Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುಮಕೂರಿಗೂ ಮೆಟ್ರೋ : ಸಂಸದ ತೇಜಸ್ವಿ ಸೂರ್ಯ ಏನಂದ್ರು..?

---Advertisement---

ಬೆಂಗಳೂರು: ಈ ಸರ್ಕಾರಕ್ಕೆ ಯಾವ ಕೆಲಸ ಎಲ್ಲಿ ಮಾಡಬೇಕು..? ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ತಲೆ ಕೆಟ್ಟೋಗಿದೆ ಎಂಬುದಕ್ಕೆ ಇದೆ ಸ್ಪಷ್ಟ ಉದಾಹರಣೆ ಎಂದು ತುಮಕೂರಿನವರೆಗೂ ಮೆಟ್ರೋ ವಿಸ್ತರಣೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೆಟ್ರೋ ಹೆಸರೇ ಸೂಚಿಸುವಂತೆ ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆ ತಪ್ಪಿಸುವುದಕ್ಕೆ ಬಳಕೆ ಮಾಡುವಂತದ್ದು. ಇದು ಬೆಂಗಳೂರಿಗೆ ಬೇಕಾಗಿರುವಂತದ್ದು. ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದಕ್ಕೆ ಇರುವ ಯೋಜನೆ. ನೀವೂ ತುಮಕೂರಿಗೆ ಮೆಟ್ರೋ ಅಥವಾ ರೈಲು ಕನೆಕ್ಷನ್ ಕೊಡುವುದನ್ನ ನಾನು ವಿರೋಧ ಮಾಡ್ತಾ ಇಲ್ಲ. ಜನ ಅದನ್ನ ಅನ್ಯತಾ ಭಾವಿಸಬೇಡಿ. ಒಂದು ಕಿಲೋ ಮೀಟರ್ ಮೆಟ್ರೋ ಮಾಡುವುದಕ್ಕೆ 450 ಕೋಟಿ ರುಪಾಯಿ ಖರ್ಚಾಗುತ್ತೆ. ಅದೇ ಸಬರ್ಬನ್ ರೈಲು ಮಾಡ್ತೀವಿ ಅಂದ್ರೆ 150 ಕೋಟಿ ಖರ್ಚಾಗುತ್ತದೆ. ಆಗ ಇದಕ್ಕಿಂತ ಹೆಚ್ಚು ಪ್ಯಾಸೆಂಜರ್ ಓಡಾಡಬಹುದು. ಮೆಟ್ರೋ ಡಿಸೈನ್ ನೋಡಿ ಕುಳಿತುಕೊಳ್ಳುವುದಕ್ಕೆ ಕಡಿಮೆ ಜಾಗವಿರುತ್ತೆ, ನಿಂತುಕೊಳ್ಳುವುದಕ್ಕೆ ಹೆಚ್ಚು ಜಾಗವಿರುತ್ತದೆ. ತುಮಕೂರಿನಿಂದ ಬೆಂಗಳೂರಿಗೆ ಒಂದು ಗಂಟೆಗಳ ಕಾಲ ನಿಂತು ಬರುವುದಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗಬೇಕೆಂದು ಯೋಜನೆಯನ್ನ ಜಾರಿಗೆ ಮಾಡಿದ್ರೆ ಇದೇ ರೀತಿ ಆಗೋದು. ಮೊದಲು ಬೆಂಗಳೂರಿನ ಮೆಟ್ರೋ ಯೋಜನೆ ಕಂಪ್ಲೀಟ್ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ. ತುಮಕೂರು ಹಾಗೂ ಬೆಂಗಳೂರಿಗೆ ಪ್ರತಿದಿನವೂ ಓಡಾಡುವವರ ಸಂಖ್ಯೆ ಕಡಿಮೆ ಏನು ಇಲ್ಲ. ಟ್ರೈನ್, ಬಸ್ ಗಳೆಲ್ಲಾ ತುಂಬಿರುತ್ತವೆ. ಹೀಗಾಗಿ ಮೆಟ್ರೋ ರೈಲು ಮಾಡಿದರೆ ಅನುಕೂಲವಾಗುತ್ತೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...