ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05: ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆ ಪಡೆಯುವ ನಿಟ್ಟಿನಲ್ಲಿ ಚಿತ್ರದುರ್ಗ ನಗರದ ಅಕ್ಷಯ್ ಗ್ಲೋಬಲ್ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಆರೈಕೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಮನೋವೈದ್ಯರಾದ ಡಾ. ರಾಜೇಶ್ವರಿ ಜಿ. ಹೊಂಗಲ್ ಅವರು ಇಲ್ಲಿ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡುತ್ತಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 1ರಿಂದ 2 ಗಂಟೆ ಹಾಗೂ ಸಂಜೆ 5ರಿಂದ ರಾತ್ರಿ 8.30ರವರೆಗೆ ವೈದ್ಯರ ಸೇವೆ ಲಭ್ಯವಿರಲಿದೆ.

ಯಾವ ಸಮಸ್ಯೆಗಳಿಗೆ ಚಿಕಿತ್ಸೆ?
ಖಿನ್ನತೆ, ಆತಂಕ ಮತ್ತು ಭಯ, OCD (ಪದೇಪದೇ ಪರಿಶೀಲಿಸುವುದು, ಎಣಿಸುವುದು, ಕೈ ತೊಳೆಯುವುದು ಅಥವಾ ವಸ್ತುಗಳನ್ನು ಜೋಡಿಸುವುದು), ಮೂಡ್ನಲ್ಲಿ ತೀವ್ರ ಬದಲಾವಣೆ, ಮರೆವು ಮತ್ತು ಏಕಾಗ್ರತೆಯ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ಸಲಹೆ ಪಡೆಯಬಹುದು.
ಇದರ ಜೊತೆಗೆ ಕೋಪ, ಸಿಡುಕುತನ, ಆಕ್ರಮಣಕಾರಿ ವರ್ತನೆ, ಅಚಾನಕ್ ಪ್ರಜ್ಞೆ ಕಳೆದುಕೊಳ್ಳುವಿಕೆ, ಮದ್ಯಪಾನ, ತಂಬಾಕು/ನಿಕೋಟಿನ್, ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ವ್ಯಸನದ ಸಮಸ್ಯೆಗಳಿಗೂ ವೈದ್ಯಕೀಯ ನೆರವು ಲಭ್ಯವಿದೆ.
ತಮ್ಮಷ್ಟಕ್ಕೆ ತಾವೇ ಮಾತನಾಡುವುದು ಅಥವಾ ನಗುವುದು, ಸ್ವಯಂ ಆರೈಕೆಯಲ್ಲಿ ನಿರ್ಲಕ್ಷ್ಯ, ಅಲೆದಾಡುವಿಕೆ ಸೇರಿದಂತೆ ವಿವಿಧ ವರ್ತನಾ ಬದಲಾವಣೆಗಳು ಕಂಡುಬಂದರೂ ಮನೋವೈದ್ಯರ ಸಲಹೆ ಪಡೆಯಬಹುದು. ಮಕ್ಕಳು ಮತ್ತು ಕಿಶೋರರಲ್ಲಿ ಕಂಡುಬರುವ ವರ್ತನಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಸಾವಿನ ಅಥವಾ ಆತ್ಮಹತ್ಯೆಯ ಆಲೋಚನೆಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ.
ಎಲ್ಲಿದೆ ಕೇಂದ್ರ?
ಅಕ್ಷಯ್ ಗ್ಲೋಬಲ್ ಆಸ್ಪತ್ರೆ, ಚಾಲ್ಲಕೆರೆ ರಸ್ತೆ, ಶ್ರೀ ರಾಮ ಕಲ್ಯಾಣ ಮಂಟಪದ ಎದುರು, ಚಿತ್ರದುರ್ಗ. ಅಪಾಯಿಂಟ್ಮೆಂಟ್ಗಾಗಿ 08194295109 ಸಂಖ್ಯೆಗೆ ಸಂಪರ್ಕಿಸಬಹುದು.












