Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾರ್ಚ್ 3 ವಿಶ್ವ ಕನ್ನಡ ಸಿನಿಮಾ ಎಂದು ಘೋಷಣೆ : ಸಿಎಂ ಬಸವರಾಜ್ ಬೊಮ್ಮಾಯಿ

Facebook
Twitter
Telegram
WhatsApp

ಬೆಂಗಳೂರು: ಇಂದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಇಂದಿನಿಂದ ಮಾರ್ಚ್ 10ರ ತನಕ ಚಲನಚಿತ್ರೋತ್ಸವ ನಡೆಯಲಿದೆ.

ಉದ್ಘಾಟನೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ತಮ್ಮ ಬಾಲ್ಯದ ಸಿನಿಮಾದ ಬಗ್ಗೆ ನೆನೆದಿದ್ದಾರೆ. ಬ್ಲಾಕ್ ಅಂಡ್ ವೈಟ್ ಸಿನಿಮಾಗಳೇ ನನಗೆ ಇಷ್ಟವಾಗ್ತಾ ಇತ್ತು. ಈಗಲೂ ಅದೇ ಇಷ್ಟ. ಈಗಿನ ಸಿನಿಮಾದಲ್ಲೂ ಆಗಾಗ ಬ್ಲಾಕ್ ಅಂಡ್ ವೈಟ್ ಕಾಣಿಸುತ್ತಿರುತ್ತೆ.

ಕಾಲೇಜಲ್ಲಿ ಸಿನಿಮಾ ಹೋಗುವಾಗ ಹೌಸ್ ಫುಲ್ ಅಂತ ಬೋರ್ಡ್ ಇರ್ತಾ ಇತ್ತು. ಆದ್ರೂ ಕೂಡ ಬಿಡ್ತಾ ಇರ್ಲಿಲ್ಲ. ಕನ್ನಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಈಗ ನಡೀತಾ ಇದೆ. ಇದು ಚೆನ್ನಾಗಿ ನಡೆಯಬೇಕು.

ಚಲನಚಿತ್ರ ರಂಗ ಉಳಿಸೋದು ತುಂಬಾ ಅನಿವಾರ್ಯತೆ ಇದೆ. ಕನ್ನಡ ಉಳಿಯೋದಕ್ಕೆ, ಕನ್ನಡ ಬೆಳೆಯೋದಕ್ಕೆ, ಅದರ ಭವಿಷ್ಯ ಬೆಳೆಯೋದಕ್ಕೆ ಸಿನಿಮಾ ಅವಶ್ಯಕತೆ ಇದೆ. ಅತ್ಯಂತ ಪ್ರಭಾವಿ‌ ಮಾಧ್ಯಮ ಅಂದ್ರೆ ಅದು ಸಿನಿಮಾ. ಥಿಯೇಟರ್ ಇದ್ದರೆ ತಾನೇ ಜನ ಬರೋದು ಸಿನಿಮಾ ನೋಡೋದು. ನಮ್ಮಲ್ಲಿರುವ ಟ್ಯಾಲೆಂಟ್ ಅನ್ನ ಇಲ್ಲಿಯೆ ಬಳಕೆ ಮಾಡಿ, ಆಮೇಲೆ ಮುಂದೆ ಹೋಗಿ. ಪರಿವಾರದ ಜೊತೆಗೆ ಬಂದು ಸಿನಿಮಾ ನೋಡ್ತಾ ಇದ್ರಲ್ಲ. ಆ ರೀತಿ ಈಗ ಮಾಡಬೇಕು. ಆ ನಿಟ್ಟಿನಲ್ಲಿ ಥಿಂಕ್ ಮಾಡೋದಕ್ಕೆ ನಮ್ಮ ಸರ್ಕಾರ ಚಿಂತೆ ಮಾಡುತ್ತೆ. ಹೀಗಾಗಿ ಇಂದಿನ ದಿನವನ್ನ ಅಂದರೆ ಮಾರ್ಚ್ 3ಅನ್ನ ವಿಶ್ವ ಕನ್ನಡ ಸಿನಿಮಾ ದಿನವೆಂದು ಘೋಷಣೆ ಮಾಡಲಾಗುತ್ತಿದೆ ಎಂದರು.

ಸಿಎಂ ಘೋಷಣೆಯ ಬೆನ್ನಲ್ಲೇ ಚಿತ್ರರಂಗ ಹಾಗೂ ಅಕಾಡೆಮಿ ಪರವಾಗಿ ಸುನೀಲ್ ಪುರಾಣಿಕ್ ಧನ್ಯವಾದ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಮಕ್ಕಳಿಗಿಲ್ಲ ಗ್ರೇಸ್ ಮಾರ್ಕ್ಸ್..!

ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ಬಾರಿಗಿಂತ ಕಡಿಮೆ ಬಂದಿದೆ. ಅದರಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದರು, ಫಲಿತಾಂಶ ಹೇಳಿಕೊಳ್ಳುವ ಮಟ್ಟಕ್ಕೆ ಬಂದಿಲ್ಲ. ಈ ಗ್ರೇಸ್ ಮಾರ್ಕ್ಸ್ ವಿಚಾರವಾಗಿ ಸಿಎಂ

ರಾಜಕೀಯ ನಿಂತ ನೀರಲ್ಲ, ಕೆಲವ ಬದಲಾವಣೆಗಳು ಅನಿವಾರ್ಯ : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17 :  ನಾನು ನನ್ನ ಶಾಸಕ ಸ್ಥಾನ ಅವಧಿ ಮುಗಿದ ಮೇಲೆ ಬೇರೆ ಪಕ್ಷಕ್ಕೆ

ಸಾಲ ಇರುವ ಜಮೀನು ನೀಡಿ ಜ್ಯೂ.ಎನ್ಟಿಆರ್ ಗೆ ಮೋಸ ಮಾಡಿದ ಯುವತಿ ವಿರುದ್ಧ ನಟ ದೂರು..!

ಜ್ಯೂ. NTR ಆಸ್ತಿಯೊಂದನ್ನು ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಇದೀಗ ಮೋಸ ಮಾಡಿದ ಯುವತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ತಿ ಮೇಲೆ ಕೋಟ್ಯಾಂತರ ರೂಪಾಯಿ ಸಾಲವಿದ್ದು, ನ್ಯಾಯ ಕೇಳುತ್ತಿದ್ದಾರೆ. ಜ್ಯೂ. NTR, ಆರ್

error: Content is protected !!