ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯಗೆ ಸಹಾಯ ಮಾಡಿದ ಪುಟ್ಟ ಬಾಲಕಿ..!

suddionenews
1 Min Read

ವಿಜಯಪುರ: 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಈಗಾಗಲೇ ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಬಳಿ ತಲುಪಿ, ಸಮಸ್ಯೆಗಳನ್ನು ಆಲಿಸುತ್ತಿರುವ ಸಿದ್ದರಾಮಯ್ಯಗೆ ಪುಟ್ಟ ಬಾಲಕಿಯೊಬ್ಬಳು, ಹಣದ ಸಹಾಯ ಹಸ್ತ ಚಾಚಿದ್ದಾಳೆ.

ವಿಜಯಪುರದಲ್ಲಿ ಸಿದ್ದರಾಮಯ್ಯ ಪ್ರಚಾರದ ಕಾರ್ಯ ನಡೆಸುತ್ತಿದ್ದಾರೆ. ಸಿಂದಗಿ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶ ನಡೆದಿದೆ. ಈ ವೇಳೆ, ವಿದ್ಯಾರ್ಥಿನಿ ಜೀಯಾ ಎಂಬಾಕೆ ತಾನು ಕೂಡಿಟ್ಟಿದ್ದ ಹಣವನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದಾಳೆ. ನೀವೂ ಈ ಬಾರಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೇಳಿದ್ದಾಳೆ.

ಆ ಪುಟ್ಟ ಬಾಲಕಿಯ ಆಸೆ ಕಂಡು ಸಿದ್ದರಾಮಯ್ಯ ಅವರಿಗೆ ಖುಷಿಯಾಗಿದೆ. ಜೀಯಾ ನೀಡಿದ ಹಣವನ್ನು ಮತ್ತೆ ವಾಪಸ್ ಮಾಡಿ, ಇದು ನಿನ್ನ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿಕೋ ಎಂದು ಹೇಳಿ ವಾಪಸ್ ಮಾಡಿದ್ದಾರೆ. ಈ ಬಗ್ಗೆ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಜೀಯಾ ಮಾತನಾಡಿದ್ದು, ಸಿದ್ದರಾಮಯ್ಯ ಯಾವಾಗಲೂ ಬಡವರ ಪರವಾಗಿ ಇದ್ದಾರೆ. ಅವರು ಬಡವರ ಪರ ಕೆಲಸ ಮಾಡುತ್ತಾರೆ. ಅದಕ್ಕೆ ನಾನು ಕೂಡಿಟ್ಟ ಹಣವ್ನು ಅವರಿಗೆ ನೀಡಲು ಹೋದೆ. ನನಗೆ ಓದುವುದಕ್ಕೆಎ ಇಟ್ಟುಕೋ ಅಂತ ವಾಪಾಸ್ ನೀಡಿದರು ಎಂದಿದ್ದಾಳೆ ಆ ವಿದ್ಯಾರ್ಥಿನಿ.

Share This Article
Leave a Comment

Leave a Reply

Your email address will not be published. Required fields are marked *