ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ, ಬರೀ ಕಣ್ಣೀರು ಸುರಿಸೋದು, ಜೋರು ಧ್ವನಿಯಲ್ಲಿ ಎಲ್ಲರಿಗೂ ಕಿರಿಕಿರಿ ಮಾಡೋದೆ ಬಂತು. ಹಾಗೇ ಮೂರು ಸಲ ಜೈಲು ವಾಸ ಸೇರಿ ಹೆಚ್ಚು ಸಲ ಜೈಲು ಸೇರಿದವರೆಂಬ ಹಿಸ್ಟರಿಯನ್ನು ಬರೆದಾಯ್ತು. ಇದೀಗ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಚೈತ್ರಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚೈತ್ರಾಗೆ ಈ ಬಾರಿಯೂ ಉಸ್ತುವಾರಿಯನ್ನು ನೀಡಲಾಗಿತ್ತು. ಆದರೆ ಉಸ್ತುವಾರಿಯಲ್ಲಿ ಪಕ್ಷಪಾತವನ್ನೇ ಹೆಚ್ಚು ಮಾಡಿದರು. ಇದಕ್ಕೆ ರಜತ್ ಸೇರಿದಂತೆ ಎದುರಾಳಿಗಳು ತಿರುಗಿ ಬಿದ್ದಿದ್ದರು. ಇದೀಗ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಇದೇ ವಿಚಾರ ಬಂದಿದೆ. ಕಿಚ್ಚನ ಕ್ಲಾಸ್ ಗೆ ಚೈತ್ರಾ ಕಣ್ಣೀರು ಹಾಕಿದ್ದಾರೆ.
ಇವತ್ತು ಕಿಚ್ಚ ಸುದೀಪ್ ಕೂಡ ನಾಮಿನೇಷನ್ ಮಾಡುವುದಕ್ಕೆ ಒಂದು ಅವಕಾಶ ಕೊಟ್ಟರು. ಈ ವೇಳೆ ಮತ್ತೆ ಚೈತ್ರಾ ಹೆಸರನ್ನೇ ಮನೆ ಮಂದಿ ತೆಗೆದುಕೊಂಡರು. ಆಗ ಚೈತ್ರಾ, ಯಾವಾಗಲೂ ಉಸ್ತುವಾರಿ ಕೊಡ್ತಾರೆ. ಕಳಪೆ ಕೊಡುವಾಗ ಉಸ್ತುವಾರಿ ಸರಿಯಾಗಿ ಮಾಡಲಿಲ್ಲ ಎಂಬ ಕಾರಣವನ್ನ ನೀಡ್ತಾರೆ. ಬರೀ ಕುಗ್ಗಿಸೋ ಕೆಲಸವನ್ನೇ ಮಾಡ್ತಾರೆ ಎಂದು ಕಣ್ಣೀರು ಹಾಕಿದ್ದಾರೆ. ಆಗ ಕೋಪಗೊಂಡ ಕಿಚ್ಚ, ನೀವ್ ಹೇಳ್ತೀರಲ್ಲ ಕುಗ್ಗಿಸಿದ್ರು ಅಂತ. ನೀವೂ ಹೆಸರು ತೆಗದುಕೊಂಡಾಗ ಅವರು ಕುಗ್ಗಲ್ವಾ..? ಬಾಣ ಬಿಡೋಕೆ ರೆಡಿ ಇರುವವರು ಬಾಣ ಬಿಡಿಸಿಕೊಳ್ಳೋಕೂ ರೆಡಿ ಇರಬೇಕು. ತಗೋಳೋಕೆ ರೆಡಿ ಇಲ್ಲ ಅಂದ್ರೆ ಈ ಆಟಕ್ಕೆ ಫಿಟ್ ಇಲ್ಲ ಎಂದು ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿ ವಾರ ನಾಮಿನೇಷನ್ ನಿಂದ ಸೇವ್ ಆದಾಗಲೂ ಏನೋ ಒಂದು ಮಾಡ್ತೀನಿ ಅಂತ ಹೇಳಿ ಏನು ಮಾಡದ ಚೈತ್ರಾ ಕಂಡು ನಿಜಕ್ಕೂ ಸುದೀಪ್ ಅವರಿಗೂ ಕೋಪ ತರಿಸಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್