ದಕ್ಷಿಣ ಕನ್ನಡ: ನಮ್ಮ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಮಣ್ಯ ಕೂಡ ಒಂದು. ಅದರಲ್ಲೂ ಇಲ್ಲಿಗೆ ಬಂದು ಪೂಜೆ ಮಾಡಿ ಹೋದರೆ ಇರುವಂತಹ ಸರ್ಪ ದೋಷ ದೂರವಾಗುತ್ತದೆ. ಹೀಗಾಗಿಯೇ ಸಾಕಷ್ಟು ಜನ ಸರ್ಪ ದೋಷ ನಿವಾರಣೆಗಾಗಿ ಕುಕ್ಕೆಗೆ ಭೇಟಿ ನೀಡುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಗುಡ್ ನ್ಯೂಸ್ ನೀಡಿದ್ದಾರೆ. ತಾವೂ ಗರ್ಭಿಣಿ ಎಂಬುದನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಗೆ ಮದುವೆಯಾದ ಮೇಲೆ ಮಕ್ಕಳಾಗಿರಲಿಲ್ಲ. ಕತ್ರೀನಾಗೂ 42 ವಯಸ್ಸಾಗ್ತಾ ಇತ್ತು. ಟ್ರೀಟ್ಮೆಂಟ್ ತೆಗೆದುಕೊಂಡರು ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗಿದ್ದರು. ಅಲ್ಲಿ ಕತ್ರಿನಾ ಜಾತಕ ನೋಡಿದ ಜ್ಯೋತಿಷ್ಯರು, ಸರ್ಪ ದೋಷ ಇರುವುದನ್ನು ತಿಳಿಸಿದ್ದಾರೆ. ಸರ್ಪ ದೋಷಕ್ಕಾಗಿ ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋದರೆ ದೋಷ ಪರಿಹಾರವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಕುಟುಂಬಸ್ಥರೆಲ್ಲರು ಸೇರಿ ಮಾರ್ಚ್ ತಿಂಗಳಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದರು. ನಾಗ ದೇವರಿಗೆ ಪರಿಹಾರ ಪೂಜೆಯನ್ನು ಮಾಡಿಸಿ ಹೋಗಿದ್ದರು. ಇದೀಗ ಅದಕ್ಕೆ ಉತ್ತರವಾಗಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕತ್ರಿನಾ ಕೈಫ್ ಗರ್ಬಿಣಿಯಾಗಿದ್ದಾರೆ. ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ಅಂದಿನಿಂದ ಸಂತಾನ ಭಾಗ್ಯಕ್ಕಾಗಿ ಸಾಕಷ್ಟು ಪೂಜೆಗಳನ್ನ ಮಾಡಿದ್ದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಇಲ್ಲಿಯೇ ಒಂದು ದಿನ ವಾಸ್ತವ್ಯ ಹೂಡಿದ್ದರು. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ನವೆಂಬರ್ ತಿಂಗಳಿಗೆ ಮಗುವಿನ ದರ್ಶನವಾಗಲಿದೆ.

