ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಮಂಡಿನೋವು ಅನ್ನೋದು ಈ ಮೊದಲೆಲ್ಲಾ ನಮ್ಮ ಅಜ್ಜ ಮುತ್ತಾತಂದಿರಿಗೆ ಬರ್ತಾ ಇತ್ತು. ವಯಸ್ಸಾದ ಮೇಲೆ, ಮೂಳೆ ಸವೆಯುವುದಕ್ಕೆ ಶುರುವಾದ ಮೇಲೆ. ಆದರೆ ಈಗಿನ ಪೀಳಿಗೆಯವರಲ್ಲಿ ಸಮಸ್ಯೆ ಬಹಳ ಬೇಗನೇ ಬರ್ತಾ ಇದೆ. ಇಪ್ಪತ್ತು/ಇಪ್ಪತ್ತೈದನೇ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅದೆಷ್ಟೋ ಜನ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ನೆಲದ ಮೇಲೆ ಕುಳಿತುಕೊಳ್ಳುವುದಕ್ಕೂ ಕಷ್ಟ ಪಡ್ತಾ ಇದಾರೆ, ಮೆಟ್ಟಿಲುಗಳನ್ನ ಹತ್ತುವುದಕ್ಕೂ ಸಂಕಟ ಪಡುತ್ತಿದ್ದಾರೆ. ಈ ರೀತಿ ಚಿಕ್ಕ ವಯಸ್ಸಿಗೇನೆ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿಯೇ ಸೇವಿಸಬೇಕಾದ್ದನ್ನ ಸೇವಿಸುತ್ತಿಲ್ಲ ಎಂದೇ ಅರ್ಥ. ಹಾಗಾದ್ರೆ ಈ ಮೂಳೆ ಸಮಸ್ಯೆಗೆ ಪರಿಹಾರ ಏನು ಮಾಡಬೇಕು ಎಂಬುದನ್ನ ಇಲ್ಲಿ ತಿಳಿಸ್ತೀವಿ ನೋಡಿ.
* ಸಾಧ್ಯವಾದಷ್ಟು ನಮ್ಮ ಆಹಾರ ಕ್ರಮದಲ್ಲಿ ಹಸಿರು ತರಕಾರಿ, ಹಣ್ಣುಗಳನ್ನ ಅಳವಡಿಸಿಕೊಳ್ಳಬೇಕು. ಪ್ರತಿದಿನದ ಆಹಾರದಲ್ಲಿ ಅದನ್ನ ಸೇವಿಸುತ್ತಾ ಬರಬೇಕು. ಆಗ ಈ ಮೂಳೆ ನೋವಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ.
* ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳಲ್ಲಿ ಜಾಯಿಂಟ್ ಗೆ ಸಂಬಂಧಿಸಿದ ಅಂಶಗಳು ಅಡಗಿವೆ. ಹೀಗಾಗಿ ಸಾಧ್ಯವಾದಷ್ಟು ಈ ಹಣ್ಣುಗಳನ್ನು ತಿನ್ನುತ್ತಾ ಇರಿ.

* ಮಂಡಿನೋವಿನಿಂದ ಏನಾದ್ರೂ ಬಳಲುತ್ತಾ ಇದ್ದರೆ ಫೈನಾಪಲ್ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ. ಒಂದು ವಾರ ರೆಗ್ಯೂಲರ್ ಆಗಿ ತಿಂದು ನೋಡಿ. ಇದರಲ್ಲಿರುವ ಅಂಶವೂ ಮಂಡಿನೋವನ್ನ ಕಡಿಮೆ ಮಾಡುತ್ತದೆ.
* ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಹಾಗೂ ಕೆ ಅಂಶಗಳಿವೆ. ಇದು ನಿಮ್ಮ ತ್ವಜೆಯನ್ನು ಚೆಂದ ಮಾಡುವುದಲ್ಲದೆ, ಮೂಳೆಗಳ ಬಲವರ್ಧನೆಗೂ ಸಹಾಯ ಮಾಡುತ್ತದೆ.
* ಹಾಗೇ ಮಂಡಿನೋವು ಬರುವುದಕ್ಕೆ ಪ್ರಮುಖ ಕಾರಣವಾದ ಕಾರ್ಟಲೇಜ್ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುವುದು ಬ್ರೋಕಲಿ. ಪ್ರತಿದಿನ ಬ್ರೋಕಲಿ ಜೊತೆಗೆ ಮಿಶ್ರ ತರಕಾರಿಗಳನ್ನ ಹಾಕಿ, ಸ್ಟೀಮ್ ಮಾಡಿ ತಿನ್ನೋದರಿಂದ ಹಲವು ಉಪಯೋಗಗಳು ಸಿಗುತ್ತವೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್