Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಕ್ಷಕರಿಗೆ ಇನ್ಮುಂದೆ ಮೇಡಂ, ಸರ್ ಎನ್ನುವಾಗಿಲ್ಲ.. ಟೀಚರ್ ಎಂದೇ ಕರೆಯಬೇಕು..!

Facebook
Twitter
Telegram
WhatsApp

ತಿರುವನಂತಪುರಂ: ಈ ಮುಂಚೆ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನ ಟೀಚರ್ ಎಂದೇ ಕರೆಯುತ್ತಿದ್ದರು. ಲಿಂಗಬೇಧವಿಲ್ಲದೆ ಒಂದೇ ಪದದಲ್ಲಿ ಕರೆಯುತ್ತಿದ್ದರು. ಆದ್ರೆ ಇತ್ತೀಚೆಗೆ ಅದು ಸರ್, ಮೇಡಂ ಎಂಬ ಪದಗಳಿಂದ ಕರೆಯುತ್ತಿದ್ದಾರೆ. ಆದರೀಗ ಈ ಪದಕ್ಕೆ ಕೇರಳದಲ್ಲಿ ಬ್ರೇಕ್ ಬಿದ್ದಿದೆ.

ಇನ್ಮುಂದೆ ಪಾಠ ಹೇಳಿಕೊಡುವ ಗುರುಗಳಿಗೆ ಸರ್, ಮೇಡಂ ಎನ್ನುವ ಹಾಗಿಲ್ಲ. ಟೀಚರ್ ಎಂದೇ ಸಂಬೋಧಿಸಬೇಕು ಎಂದು ಕೇರಳದಲ್ಲಿ ಕಡ್ಡಾಯಗೊಳಿಸಿದೆ. ಪಾಲಕ್ಕಡ್ ಜಿಲ್ಲೆಯ ಒಲಶ್ಯೆರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ನಿಯಮವನ್ನ ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲ ಈ ನಿಯಮವನ್ನ ಜಾರಿಗೆ ತಂದ ಮೊದಲ ಶಾಲೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್, ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುವಂದ ಅವರಿಂದ ಸ್ಪೂರ್ತಿ ಪಡೆದು, ಈ ನಿರ್ಧಾರಕ್ಕೆ ಬರಲಾಗಿದೆ. ಮತೂರು ಪಂಚಾಯತಿಯಲ್ಲೂ ಈ ಲಿಂಗ ಸಮಾನತೆಯಿಂದ ಹುದ್ದೆಯ ಹೆಸರಲ್ಲಿ ಕರೆಯಲಾಗುತ್ತಿದ್ದ ಸಂಪ್ರದಾಯವನ್ನು ತೊಡೆದು ಹಾಕಲಾಗಿತ್ತು. ಇದೆಲ್ಲರಿಂದ ಪ್ರೇರಣೆಗೊಂಡು ನಾವೂ ಕೂಡ ಲಿಂಗ ಬೇಧವಿಲ್ಲದೆ ಸಂಬೋಧಿಸುವ ಪದ್ಧತಿಯನ್ನು ನಮ್ಮ ಶಾಲೆಯಲ್ಲಿ ಅಳವಡಿಸಲಾಗಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!