Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆರಗೋಡು ಹನುಮ ಧ್ವಜ ವಿಚಾರ: ಸುಮಲತಾ ಹೇಳಿದ ಆ ಎಂಎಲ್ಎ ಯಾರು..?

---Advertisement---

 

 

ಮಂಡ್ಯ: ಕೆರಗೋಡುವಿನ ಹನುಮ ಧ್ವಜದ ವಿಚಾರದಿಂದ ವಾತಾವರಣ ಇನ್ನು ತಿಳಿಯಾಗಿಲ್ಲ. ಈ ಸಂಬಂಧ ಮಂಡ್ಯ ಸಂಸದೆ ಸುಮಲತಾ ಅವರು ಮಾತನಾಡಿದ್ದು, ನಮಗೂ ಮಾಹಿತಿ ಇದೆ. ಆ ಎಂಎಲ್ಎ ಹೇಳಿದ್ದರಿಂದ ತಹಶಿಲ್ದಾರ್ ಈ ರೀತಿ ಮಾಡಿದ್ದಾರೆಂದು. ಆದರೆ ದಾಖಲೆಯ ಮಾಹಿತಿ ಇಲ್ಲ ಎಂದಿದ್ದಾರೆ.

 

ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಾ ಇದ್ದೀನಿ. ಎಲ್ಲಾ ಕಡೆ ಕೆರೆಗಳನ್ನು ಮುಚ್ಚಲಾಗಿದೆ. ಆ ಕಡೆ ಗಮನ ಹರಿಸಬಹುದಿತ್ತು. ರಾಮನ ಬಾವುಟವನ್ನೋ, ಹನುಮನ ಬಾವುಟವನ್ನೋ ಹಾರಿಸಿರುವುದು ಯಾರಿಗೂ ನೋವು ತಂದಿಲ್ಲ. ಮಂದಿರದ ಮೇಲೋ ಎಲ್ಲೋ ಹಾರಿಸಿದ್ದರೆ, ಆ ಸಮುದಾಯದವರು ಇದ್ದಲ್ಲಿ ಹೋಗಿ ಹಾರಿಸಿದ್ದರೆ ಅದು ತಪ್ಪು. ಆದರೆ ಆ ರೀತಿಯಾಗಿ ಏನು ಇಲ್ಲ. ನೀವೂ ಆ ಜಾಗಕ್ಕೆ ಹೋಗಿ ಸರಿಯಾದ ರಿತೀಯಲ್ಲಿ ಮಾತನಾಡಿ, ಆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.

 

ಸ್ಥಳೀಯವಾಗಿ ಅಲ್ಲಿ ರಾಜಕಾರಣ ನಡೆದಿದೆ. ಎಂಎಲ್ಎ ಸೂಚನೆ ಮೇರೆಗೆ ತಹಶಿಲ್ದಾರ್ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಮಾತು ನಮ್ಮ ಕಿವಿಗೂ ಬಿದ್ದಿದೆ. ಆದರೆ ಪಕ್ಕ ಮಾಹಿತಿ ಇಲ್ಲ. ಸರಿಯಾದ ರೀತಿಯಲ್ಲಿ ಸಮಸ್ಯೆ ಬಗೆಹರಿಸದೆ, ಬಲವಂತವಾಗಿ ಆಕ್ಷನ್ ತೆಗೆದುಕೊಳ್ಳುವುದು ಸರಿಯಲ್ಲ. 30 ವರ್ಷದಿಂದಾನು ಮಂಡ್ಯದಲ್ಲಿ ರಾಜಕಾರಣ ಹೇಗೆ ಎಂಬುದನ್ನು ನೋಡಿಕೊಂಡು ಬಂದಿದ್ದೀನಿ. ನಿಜವಾಗಲೂ ಅಲ್ಲಿನ ಸ್ಥಳೀಯರಿಗೆ ಹರ್ಟ್ಸ್ ಆಗಿದೆ. ಈ ರೀತಿಯ ಪರಿಸ್ಥಿತಿ ಇದ್ದಾಗ ಎಲ್ಲಾ ಪಕ್ಷದವರು ಜಾಯಿನ್ ಆಗುತ್ತಾರೆ. ಹೀಗಾಗಿ ರಾಜಕೀಯ ಬಣ್ಣ ಬಳಿಯಲಾಗಿದೆ.

ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದಕ್ಕಿಂತ, ಅಲ್ಲಿನ ಜನರ ಮನಸ್ಸಿಗೆ ಧಾರ್ಮಿಕ ಧಕ್ಕೆ ಉಂಟಾಗಿದೆ. ಅದನ್ನು ಸರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡಬೇಕಿದೆ. ಇವತ್ತು ನೀವೂ ಪ್ರತಿಭಟನೆ ಮಾಡುತ್ತೀರಿ, ನಾಳೆ ನಾವೂ ಮಾಡುತ್ತೀವಿ ಎಂದರೆ ಅರ್ಥವಿಲ್ಲ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment