ಕಡೆಗೂ ಸಿಕ್ಕಿದ ಪುನೀತ್ ಕೆರೆಹಳ್ಳಿ : ರಾಜಸ್ಥಾನದಲ್ಲಿ ಅಡಗಿದ್ದವ ಸಿಕ್ಕಿದ್ದೇಗೆ..?

suddionenews
1 Min Read

ರಾಮನಗರ: ಗೋ ಸಾಗಾಣೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ತಪ್ಪಿಸಿಕೊಂಡಿದ್ದ. ಇದೀಗ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಬಳಿಕ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ನಾಪತ್ತೆಯಾಗಿದ್ದರು. ತನಿಖೆ ಆರಂಭಿಸಿದ ಸಾತನೂರು ಪೊಲೀಸರು, ಇಂದು ಐವರನ್ನು ಬಂಧಿಸಿದ್ದಾರೆ. ‌ಇಲ್ಲಿಂದ ತಪ್ಪಿಸಿಕೊಂಡು ರಾಜಸ್ಥಾನಕ್ಕೆ ಹೋಗಿ ತಲೆ‌ಮರೆಸಿಕೊಂಡಿದ್ದರು. ರಾಜಸ್ತಾನದಲ್ಲಿಯೇ ಅವರನ್ನು ವಶಕ್ಕೆ ಪಡಿಸಲಾಗಿದೆ.

ಮಾರ್ಚ್ 31ರಂದು ಕನಕಪುರದ ಸಾತನೂರು ಬಳಿ, ಕ್ಯಾಂಟರ್ ಮೂಲಕ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಪುನೀತ್ ಕೆರೆಹಳ್ಳಿ ಮತ್ತು ಟೀಂ ಸೇರಿಕೊಂಡು ಕ್ಯಾಂಟರ್ ತಡೆದಿದ್ದರು. ಮಂಡ್ಯ ಮೂಲದ ಇದ್ರಿಶ್ ಪಾಷಾ ಕ್ಯಾಂಟರ್ ನಲ್ಲಿದ್ದರು. ಆದರೆ ಇದ್ರಿಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಪಟ್ಟಮನತೆ ಒಂದಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪುನೀತ್ ಕೆರೆಹಳ್ಳಿ ಸೇರಿದಂತೆ ಅವರ‌ ಟೀಂ ಮೇಲೆ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *