Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟ್ರೋಲ್ ಮಾಡಿದರೂ ಡೋಂಟ್ ಕೇರ್ : ಕಳಸ ಜನರ ಸ್ಥಿತಿ ಕೇಳುತ್ತಿಲ್ಲ ಅಧಿಕಾರಿಗಳು..!

Facebook
Twitter
Telegram
WhatsApp

ಚಿಕ್ಕಮಗಳೂರು: ರಸ್ತೆ, ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸ್ಥಳೀಯ ಜನ ಟ್ರೋಲ್ ಮಾಡುವ ಮೂಲಕ, ವಿಭಿನ್ನ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲು ಪ್ರಯತ್ನ ಪಡುತ್ತಾರೆ. ಆದ್ರೆ ಕೆಲವೊಮ್ಮೆ ಅದು ಕೂಡ ಯಾವುದೇ ಪ್ರಯೋಜವಾಗುವುದಿಲ್ಲ. ಇದೀಗ ಕಳಸ ಜನರ ಪರಿಸ್ಥಿತಿಯೂ ಅದೇ ಆಗಿದೆ.

ಜಿಲ್ಲೆಯ ಕಳಸ ಪಟ್ಟಣದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಇದರಿಂದ ಅಲ್ಲಿ ಬದುಕುತ್ತಿರುವ, ದಿನನಿತ್ಯ ಓಡಾಡುವ ಜನರ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆಯ ತುಂಬೆಲ್ಲಾ ಧೂಳು ಎದ್ದು ಬರುತ್ತಿದೆ. ಬಸ್ ಬಂದರೆ, ವಾಹನಗಳು ಓಡಾಡಿದರೆ ಮುಂದೆ ಬರುತ್ತಿರುವ ವ್ಯಕ್ತಿಗಳೇ ಕಾಣದಷ್ಟು ಧೂಳು ತುಂಬಿಕೊಂಡು ಬಿಡುತ್ತದೆ.

ಈ ಸಮಸ್ಯೆಯನ್ನು ನೋಡಿ ನೋಡಿ ಬೇಸತ್ತ ಸ್ಥಳೀಯರು ಟ್ರೋಲ್ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಭಿನ್ನ ವಿಭಿನ್ನ ಎನಿಸುವಂತ ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ಗಿಣಿಯೊಂದು ಹಾರಿಹೋದಾಗ ಹಸಿರಾಗಿತ್ತು. ಕಳಸ ರಸ್ತೆ ದಾಟಿ ಬಂದಾಗ ಬಣ್ಣವೇ ಬದಲು. ನನ್ನನ್ನು ನಂಬಿ ನಾನು ಕಾಗೆಯಲ್ಲ ಎಂದು ಹೇಳುವಂತ ಟ್ರೋಲ್ ಮಾಡಿದ್ದಾರೆ.

ಮತ್ತೊಂದು ಆಫ್ರಿಕನ್ ವ್ಯಕ್ತಿಯೊಬ್ಬ ಏರ್ ಪೋರ್ಟ್ ನಲ್ಲಿ ತೆಗೆಸಿಕೊಂಡ ಫೋಟೋ ಚೆಂದವಾಗಿದೆ. ಅದೇ ಕಳಸ ರಸ್ತೆಗೆ ಬಂದಾಗ ಧೂಳು ತುಂಬಿ ವಿಚಿತ್ರವಾಗಿ ಕಾಣುತ್ತಿದ್ದಾರೆ. ಇನ್ನು ಸೂಪರ್ ಮ್ಯಾನ್ ಬಗ್ಗೆಯೂ ವಿಚಿತ್ರ ಟ್ರೋಲ್ ಮಾಡಿದ್ದಾರೆ. ಕಳಸ ರಸ್ತೆಗೆ ಬಂದು ಹೋದ ಮೇಲೆ ಆಕ್ಸಿಜನ್ ಹಾಕಿಕೊಂಡ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

error: Content is protected !!