ಜೆಇಇ” 2ನೇ ಹಂತದ ಮೇನ್ಸ್‌ ಪರೀಕ್ಷೆ : 40ನೇ ರ‌್ಯಾಂಕ್ ಪಡೆದು ಹೊಸ ಇತಿಹಾಸ ಸೃಷ್ಠಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ಪಿಯು ಕಾಲೇಜು

1 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ನಲ್ಲಿ ನಡೆದ “ಜೆಇಇ 2ನೇ ಹಂತದ ಮೇನ್ಸ್‌” ಪರೀಕ್ಷೆಯಲ್ಲಿ  (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅತ್ಯುತ್ತಮ ರ್ಯಾಂಕ್‌ ಗಳಿಸುವ ಮೂಲಕ “ಜೆಇಇ ಅಡ್ಡಾನ್ಸ್ಡ್‌” ಪರೀಕ್ಷೆಗೆ ಅರ್ಹತೆ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಐಐಟಿ ಮುಂಬ್ಯೆ, ಖರಗ್‌ಪುರ್‌, ಲಕ್ನೊ ದಲ್ಲಿ ತರಬೇತಿ ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 40 ವಿದ್ಯಾರ್ಥಿಗಳು “ಜೆಇಇ ಮೇನ್ಸ್‌” ನಿಂದ “ಐಐಟಿ ಅಡ್ಡಾನ್ಸ್ಡ್‌” ಗೆ ಅರ್ಹತೆ ಪಡೆದಿದ್ದಾರೆ.

ಅದರಲ್ಲಿ ಕ್ರಮವಾಗಿ
ಕು.ಕೆ ಪಿ ಪೂಜಿತ್‌ ಕುಲಾಲ್‌ 40ನೇ ಆಲ್‌ ಇಂಡಿಯಾ ರ್ಯಾಂಕ್‌,
ಕು.ಆನಂದ್‌ ಎನ್‌ ವೈ- 354, ,
ಕು.ಪ್ರಜ್ವಲ್‌-1600,
ಕು.ಮಹಾಲಕ್ಷ್ಮಿ ಎ -1702,
ಕು.ಪ್ರವೀಣ್‌ ತಳವಾರ-1965
ಕು.ನೀಲಾಂಬಿಕಾ ತಳವಾರ-3683,
ಕು.ರಕ್ಷೀತಾ ಟಿ ಎಂ-4209,
ಕು.ಆದಿತ್ಯ ಎಸ್‌ ರಾಮ್‌-4372,
ಕು.ನಯನ ಬಿ- 4411,
ಕು.ಛಾಯಾ ಟಿ-4751,
ಕು.ಸ್ನೇಹ ಕೆ ಪಿ-4902ನೇ ಆಲ್ ಇಂಡಿಯಾ ರ್ಯಾಂಕ್ ಗಳಿಸುವ ಮೂಲಕ “ಐಐಟಿ ಅಡ್ಡಾನ್ಸ್ಡ್‌” ಗೆ ಅರ್ಹತೆಯನ್ನು ಪಡೆದು, ಕಾಲೇಜಿಗೆ ಹಾಗೂ ರಾಜ್ಯಕ್ಕೆ  ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ.  ಇವರೆಲ್ಲರೂ ಪ್ರತಿಷ್ಠಿತ “ಐಐಟಿ” ಕಾಲೇಜುಗಳಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕಾಲೇಜಿಗೆ ಹಾಗೂ ರಾಜ್ಯಕ್ಕೆ  ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್‌ ಅಮೋಘ್‌, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks