Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಲೋಕ್ ಕುಮಾರ್ ರಿಂದ ಮಾತ್ರ ಸಾಧ್ಯ ಜೈಲು ಸುಧಾರಣೆ : ಭಾಸ್ಕರ್ ರಾವ್

---Advertisement---

ಬೆಂಗಳೂರು: ಸದ್ಯ ಜೈಲಿನಲ್ಲಿ ರಾಜಾತಿಥ್ಯ ನಡಿತಿದೆ ಅನ್ನೋದು ವಿಡಿಯೋ ಸಮೇತ ಪ್ರೂವ್ ಆಗಿದೆ‌‌. ಹೀಗಾಗಿ ಅಲೋಕ್ ಕುನಾರ್ ಅವರನ್ನ ಕಾರಾಗೃಹ ಇಲಾಖೆಯ ಡಿಜಿಪಿ ಆಗಿ ನೇಮಕ ಮಾಡಲಾಗಿದೆ. ಅಲೋಕ್ ಕುಮಾರ್ 1994ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಜೈಲಿಗೆ ಸರಿಯಾದ ಅಧಿಕಾರಿಯನ್ನೆ ಹಾಕಿದ್ದಾರೆ ಎಂಬುದನ್ನ ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾಸ್ಕರ್ ರಾವ್, ಡಿಜಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಹುದ್ದೆಗೆ ನೇಮಕ ಮಾಡಿದ್ದನ್ನು ಶ್ಲಾಘಿಸಿದ್ದು, ರಾಜ್ಯದ ಜೈಲು ವ್ಯವಸ್ಥೆಯನ್ನು ಸುಧಾರಿಸಲು ಅವರು ಸರಿಯಾದ ಆಯ್ಕೆ. ಕರ್ನಾಟಕ ಹೊಸದಾಗಿ ನೇಮಕಗೊಂಡು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರಾಗಿರುವ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಶಂಸಿದ್ದಾರೆ.

ಅಲೋಕ್ ಕುನಾರ್ ಅವರು ರಾಜ್ಯದ ಜೈಲು ವ್ಯವಸ್ಥೆಯನ್ನು ನಿಜವಾಗಿಯೂ ಸುಧಾರಿಸುವ ಸಾಮರ್ಥ್ಯವಿರುವ ಏಕೈಕ ಅಧಿಕಾರಿ. ದುರುಪಯೋಗ ಮತ್ತು ಅಕ್ರಮಗಳ ಬಗ್ಗೆ ಪದೇ ಪದೇ ವಿವಾದಗಳನ್ನು ಎದುರಿಸುತ್ತಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಇಡೀ ಜೈಲು ಜಾಲವನ್ನು ಸ್ವಚ್ಛಗೊಳಿಸುವ ಮತ್ತು ಕೂಲಂಕುಷವಾಗಿ ಪರಿಶೀಲಿಸುವ ಸಾಮರ್ಥ್ಯವನ್ನು ಅಲೋಕ್ ಕುಮಾರ್ ಹೊಂದಿದ್ದಾರೆ. ಜೈಲುಗಳ ಒಳಗೆ ಪಾರದರ್ಶಕತೆ ಮತ್ತು ಶಿಸ್ತು ದೀರ್ಘ ಕಾಲದಿಂದ ಬಾಕಿ ಇದ್ದು, ಅಲೋಕ್ ಕುಮಾರ್ ಅವರ ನಾಯಕತ್ವದಲ್ಲಿ ಮಾತ್ರ ಸಾಧಿಸಬಹುದಾಗಿದೆ. ಅಲೋಕ್ ಕುಮಾರ್ ಅವರ ಅಧಿಕಾರಾವಧಿಯೊಳಗೆ ಇಡೀ ಜೈಲು ಆಡಳಿತವನ್ನು ಸರಿಪಡಿಸಲಾಗುವುದು ಎಂದು ತಾವೂ ಆಶಿಸುವುದಾಗಿ ಭಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now