ಬೆಂಗಳೂರು: ಕಾಂಗ್ರೆಸ್ ನಲ್ಲಿ ಇನ್ನು ಕೂಡ ಕುರ್ಚಿ ಕಿತ್ತಾಟ ನಡೆಯುತ್ತಲೇ ಇದೆ. ಹೊರಗೆ ಅಷ್ಟೊಂದು ಸುದ್ದಿಯಾಗದೆ ಇದ್ದರು ಒಳಗೊಳಗೆ ಬಾರಿ ಮುಸುಕಿನ ಗುದ್ದಾಟದ ರೀತಿ ನಡೀತಾ ಇದೆ. ಸಿದ್ದರಾಮಯ್ಯ ಅವರು ಅಂದುಕೊಂಡಿದ್ದನ್ನು ಸಾಧಿಸಿ ಆಗಿದೆ. ರೆಕಾರ್ಡ್ ಕೂಡ ಬ್ರೇಕ್ ಮಾಡಿದ್ದಾರೆ. ಇನ್ಮುಂದೆ ಡಿಕೆಶಿಗೆ ಅವಕಾಶ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರು ಕಾಯ್ತಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ ಇದು ಕೊನೆಯದಾ ಎಂಬ ಪ್ರಶ್ನೆಗೆ ಬಸವರಾಜ ರಾಯರೆಡ್ಡಿ ಉತ್ತರಿಸಿದ್ದಾರೆ.
ಯಾರೂ ಬೇಕಾದರೂ ಏನು ಬೇಕಾದರೂ ಹೇಳಬಹುದು ಅಲ್ವಾ. ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಹೇಗಾಗುತ್ತೆ. ನಾನು ಈಗ ಹೇಳಿದೆ ನೀವೂ ಆರಿಸುವ ತನಕ ಇರ್ತೇನೆ ಅಂತ. ಅದು ವಾಸ್ತವಿಕ ಸತ್ಯದ ಮಾತು. ಎಲ್ಲಿಯವರೆಗೂ ಜನರ ಆಶೀರ್ವಾದ ಇರುತ್ತೋ ಅಲ್ಲಿಯ ತನಕ ತಾನೇ ಇರೋದಕ್ಕೆ ಆಗುವುದು. ಅವರಿಗೂ ಏಜ್ ಪ್ಯಾಕ್ಟರ್. ನಂಗೆ 79 ಇನ್ನೊಂದೆರಡು ವರ್ಷ ಆದ್ಮೇಲೆ ವಿದಾಯ ಹೇಳ್ಬೇಕು ಅಲ್ವಾ. ಅವರು ಆ ಥರ ಅರ್ಥದಲ್ಲಿ ಹೇಳಿದ್ದಾರೆ.
ನನ್ನ ಪ್ರಕಾರ ಯಾವುದೇ ಚೇಂಜ್ ಇರಲ್ಲ. ಆದರೆ ಪಕ್ಷದ ನಿರ್ಧಾರ ಏನಿರುತ್ತೆ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿಗಳು ಬಜೆಟ್ ಪ್ರಿಪೇರ್ ಮಾಡುವುದಕ್ಕೆ ರೆಡಿಯಾಗಿದ್ದಾರೆ ಅಂತ ಅಂದ್ರೆ ಏನು ತಿಳಿದುಕೊಳ್ಳಬೇಕು. ಪ್ರೆಸ್ ನವರು ಒಂದು ಪೈಸೆ ಹೊರಗಿನವರು ಮಾತನಾಡಿದ್ರೆ 100 ಪೈಸೆ ಮಸಾಲೆ ನೀವ್ ಹಾಕ್ತೀರಿ. ಮುಖ್ಯಮಂತ್ರಿ ಬದಲಾವಣೆ ಆಗಲ್ಲ ಅನ್ಸುತ್ತೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಸಚಿವ ಸಂಪುಟದ ಬಗ್ಗೆ ನಿರ್ಧಾರ ಮಾಡಬೇಕು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















