Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀರಾಮ ಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ.. ಸುಧಾಕರ್ ಎದುರು ನಾನೇ ನಿಲ್ತೀನಿ : ಶಾಸಕ ಪ್ರದೀಪ್ ಈಶ್ವರ್ ಗರಂ

Facebook
Twitter
Telegram
WhatsApp

ಚಿಕ್ಕಬಳ್ಳಾಪುರ: ಶ್ರೀರಾಮ ಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ. ನಾವೂ ಹಿಂದೂಗಳೆ. ನಮಗೂ ಶ್ರೀರಾಮಚಂದ್ರ ದೇವರೇ. ಶ್ರೀರಾಮಚಂದ್ರನ ಭಕ್ತರು ಕಾಂಗ್ರೆಸ್ ನಲ್ಲೂ ಇದ್ದೀವಿ, ಜೆಡಿಎಸ್ ನಲ್ಲೂ ಇದ್ದೀವಿ. ನಾನು ರಾಮನನ್ನು ಆರಾಧಿಸುತ್ತೀನಿ, ಪೂಜಿಸುತ್ತೀನಿ. ಅಲ್ಲನು ಗೌರವಿಸುತ್ತೀವಿ, ಏಸುನು ಗೌರವಿಸುತ್ತೀವಿ. ಶ್ರೀರಾಮಚಂದ್ರ ಇವರೊಬ್ಬರಿಗೆ ಸೀಮಿತ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸಂಸದರಿಗೆ ನಾನು ಹೇಳುವುದು ಇಷ್ಟೇ. ನೀವೂ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ, ನಾವಂತು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿ, ಈಗ ಅಖಾಡದಲ್ಲಿ ರಕ್ಷಾ ರಾಮಯ್ಯ ಅವರಿದ್ದಾರೆ, ಎಂಎಲ್ಸಿ ರವಿ ಅಣ್ಣ ಅವರ ಹೆಸರು ಕೇಳಿ ಬರುತ್ತಿದೆ. ನಮ್ಮ ಬಾಲಾಜಿ ಅಣ್ಣ ಹೆಸರು ಕೇಳಿ ಬರುತ್ತಿದೆ. ನಮ್ಮದು ಪಕ್ಷ ನಿಷ್ಠೆ ಸರ್. ಪಕ್ಷ ಯಾರಿಗೆ ಕೊಟ್ಟರು ಅದಕ್ಕೆ ದುಡೀತೀನಿ. ಇಲ್ಲ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ನೀನೆ ನಿಂತುಕೋ ಅಂದರು ನಾನು ನಿಂತುಕೊಳ್ಳುತ್ತೀನಿ. ಕೆಪಿಸಿಸಿ ಆಫೀಸಲ್ಲಿ ಕಸ ಗುಡಿಸು ಅಂದ್ರು ಗುಡಿಸುತ್ತೀನಿ. ನಾಳೆ ರಾಜೀನಾಮೆ ಕೊಡು ಅಂದರು ಕೊಡುತ್ತೀನಿ. ನಮ್ಮದು ಏನಿದ್ದರು ಕಾಂಗ್ರೆಸ್ ಪಕ್ಷದ ಐಡಿಯಾಲಜಿ ನಂಬಿಕೊಂಡು ಬಂದವರು. ನಮ್ಮದು ಪಕ್ಷ ನಿಷ್ಠೆ ಅಷ್ಟೆ ಎಂದಿದ್ದಾರೆ‌.

 

ಇದೇ ವೇಳೆ ಸುಧಾಕರ್ ವಿಚಾರಕ್ಕೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಅವರು ಏನಾದರೂ ಬಂದರೆ ನಾನು ಪಕ್ಷಕ್ಕೂ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ನನ್ನನ್ನೇ ಕಳ್ಸಿ ಅಂತ. ನನಗೂ ಬಹಳ ಕುತೂಹಲವಿದೆ. ಎಂಟು-ಒಂಭತ್ತು ತಿಂಗಳು ನನಗೂ ಅವರಿಗೂ ಬಹಳ ಗ್ಯಾಪ್ ಬಂದಿದೆ. ಇನ್ನೊಂದು ಅವಕಾಶ ಪಕ್ಷ ಅವಕಾಶ ಕೊಟ್ಟರೆ ನಿಲ್ಲುತ್ತೇನೆ. ನಿಂತರೆ ಖಂಡಿತ ನಾನು ಗೆಲ್ಲುತ್ತೇನೆ ಎಂದಿದ್ದಾರೆ‌.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!