ಸುದ್ದಿಒನ್, ಚಿತ್ರದುರ್ಗ, ಜೂನ್. 22 : ತಾಲ್ಲೂಕಿನ ಭೀಮಸಮುದ್ರ ಯೋಗ ಟೀಮ್ ವತಿಯಿಂದ ಯೋಗ ದಿನಾಚರಣೆಯನ್ನು ಶನಿವಾರ ಆಚರಣೆ ಮಾಡಲಾಯಿತು
ಮೃತ್ಯುಂಜಯಪ್ಪ ಪ್ರೌಢಶಾಲಾ ಶಿಕ್ಷಕರು ಮಾತನಾಡಿ
ಯೋಗ ಮಾಡುವುದರಿಂದ ಬಹಳ ಮನುಷ್ಯ ಆರೋಗ್ಯಕರವಾಗಿ ಇರಬಹುದು. ಸುಮಾರು 15 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ಮನೆಯಲ್ಲಿರುವ ಮಕ್ಕಳಿಗೆ ಈಗಿನಿಂದಲೇ ಯೋಗ್ಯ ಅಭ್ಯಾಸ ಕಲಿಸಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಘೋಷಣೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಹಾಗೆಯೇ ಅವರ ದೇಹದ ಫಿಟ್ಟಾಗಿ ಇಟ್ಟು ಕೊಳ್ಳುವುದಕ್ಕೆ ಕಾರಣ ಯೋಗ ಎಂದು ತಿಳಿಸಿದರು.
ಭೀಮಸಮುದ್ರ ಯೋಗ ಟಿಮ್ ನ ಉಪಾಧ್ಯಕ್ಷರಾದ ಜಿ.ಎಸ್ ಸಿದ್ದೇಶ್, ಸದಸ್ಯರುಗಳಾದ ಎ ರಾಜು, ರವಿಕುಮಾರ್, ಶಂಕರಮೂರ್ತಿ, ಮಂಜುನಾಥ್, ವಿಜಯ್ ಕುಮಾರ್, ಲೋಕೇಶ್, ಗಿರೀಶ್, ಶಿಕ್ಷಕರಾದ ಆನಂದಪ್ಪ, ಅಜ್ಜಪ್ಪ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.















