Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಕ್ಕೆ ಬರ, ಆದರೆ ಸಚಿವರಿಗಲ್ಲ : ದಸರಾ ಹಬ್ಬಕ್ಕೆ ಹೊಸ ಕಾರು ಭಾಗ್ಯ

Facebook
Twitter
Telegram
WhatsApp

 

 

ಸುದ್ದಿಒನ್, ಬೆಂಗಳೂರು :  ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ತುಂಬಾ ಬರದ ಛಾಯೆ ಆವರಿಸಿದೆ.  ಹೀಗಿರುವಾಗ ಇಂತಹ ಬರದ ಸಮಯದಲ್ಲಿ ಸಚಿವರಿಗೆ ಮಾತ್ರ ದಸರಾ ಹಬ್ಬಕ್ಕೆ ಸರ್ಕಾರ ಕಾರು ಭಾಗ್ಯ ನೀಡಿದೆ.

ಹೌದು ರಾಜ್ಯ ಸರ್ಕಾರದಿಂದ ಸಚಿವರಿಗಾಗಿ ಹೊಸ ಕಾರುಗಳನ್ನು ಖರೀದಿ ಮಾಡಿದೆ. 33 ಸಚಿವರಿಗೆ ಹೊಸ ಇನೋವಾ ಕಾರುಗಳು ಸಿಕ್ಕಿವೆ. ಸುಮಾರು 9.9 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿ, ಸಚಿವರಿಗಾಗಿ ಕಾರುಗಳ ಉಡುಗೊರೆ ತರಲಾಗಿದೆ. 33 ಇನೋವಾ ಕಾರುಗಳ ಖರೀದಿಗಾಗಿ ಸರ್ಕಾರವೇ ಹಣ ನೀಡಿದೆ. ದಸರಾ ಆರಂಭದಲ್ಲಿಯೇ ಹೊಸ ಕಾರುಗಳ ಸಚಿವರ ಮನೆ ಬಾಗಿಲಿಗೆ ಹೋಗಿವೆ.

ರಾಜ್ಯ ಸರ್ಕಾರ ಈಗಲೇ ನೀಡಿರುವ ಗ್ಯಾರಂಟಿಗಳಿಗೆ ಹಣ ನೀಡುವುದಕ್ಕೆ ಪರದಾಡುವಂತೆ ಆಗಿದೆ. ಜೊತೆಗೆ ಸರ್ಕಾರವೇ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎಂದು ಹೇಳುತ್ತಿದೆ. ಆದರೆ ಈಗ ಕಾರುಗಳ ಖರೀದಿ ಎಷ್ಟು ಸರಿ ಎಂದೇ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬರದ ಸಮಯದಲ್ಲಿ ಹೀಗೆ ಸಚಿವರಿಗೆ ಹೊಸ ಕಾರಿನ ಅವಶ್ಯಕತೆ ಇತ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದರ ನಡುವೆ ಭತ್ಯೆ ಹೆಚ್ಚಳದ ಚರ್ಚೆಯೂ ನಡೆಯುತ್ತಿದೆ. ಅದಕ್ಕೂ ಸಮ್ಮತಿ ಸಿಗುವ ಸಾಧ್ಯತೆ ಇದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ

ಈ ರಾಶಿಗಳ ಸಂಸಾರದಲ್ಲಿ ಏನಾಯ್ತು? ಆಶ್ಚರ್ಯ! ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಶನಿವಾರ ರಾಶಿ ಭವಿಷ್ಯ -ಮೇ-18,2024 ಸೂರ್ಯೋದಯ: 05:47, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!