Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪಿತ್ತ ಬೇಗ ಕಡಿಮೆ ಆಗ್ಬೇಕು ಅಂದ್ರೆ ಹೀಗೆ ಮಾಡಿ

---Advertisement---

ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ.‌ ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು ಕೂಡ ಜಾಸ್ತಿ ಆಗುತ್ತದೆ. ಇದಕ್ಕಾಗಿ ಮಾತ್ರೆ ನುಂಗ್ತಾರೆ, ಟಾನಿಕ್ ಕುಡಿತಾರೆ. ಕೆಲವೊಂದಿಷ್ಟು ಮಂದಿಗೆ ಟೀ, ಕಾಫಿ ಕುಡಿದರೂ ಸಹ ಈ ಸಮಸ್ಯೆ ಎದುರಾಗುತ್ತದೆ. ಹಾಗಾದ್ರೆ ಈ ಪಿತ್ತದ ಸಮಸ್ಯೆಯಿಂದ ಪರಿಹಾರಕ್ಕಾಗಿ ಮನೆ ಮದ್ದನ್ನು ಬಳಸಬಹುದಾದರೆ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒಂದು ವೇಳೆ ನಿಮಗೆ ಪಿತ್ತದ ಸಮಸ್ಯೆ ಎದುರಾದರೆ, ಬೇಗನೆ ಕಡಿಮೆಯಾಗಬೇಕು ಅಂದ್ರೆ ಪುನರ್ಪುಳಿ ಸಿಪ್ಲೆಗಳನ್ನ ತೆಗೆದುಕೊಂಡು ಅದಕ್ಕೆ ಅರ್ಧ ಲೋಟ ಆಗುವಷ್ಟು ಬಿಸಿ ನೀರನ್ನ ಹಾಕಿ. ಅದು ಬಣ್ಣ ಬಿಟ್ಟು ಕೊಳ್ಳುತ್ತದೆ. ಅರ್ಧ ಗಂಟೆಗಳ ಕಾಲ ನೆನೆಯಿಟ್ಟರೆ ಅದರಲ್ಲಿರುವ ಸತ್ವ ನೀರಿನಲ್ಲಿ ಬಿಟ್ಟುಕೊಳ್ಳುತ್ತದೆ. ಬಳಿಕ ಆ ನೀರನ್ನು ಒಂದು ಲೋಟಕ್ಕೆ ಸೇರಿಸಿಕೊಳ್ಳಿ. ಬಣ್ಣವೂ ಬಂದಿರುತ್ತದೆ.

ಆ ನೀರಿಗೆ ಸ್ವಲ್ಪ ಬೆಲ್ಲವನ್ನ ಬೆರೆಸಿಕೊಳ್ಳಿ. ಆ ನೀರನ್ನ ಒಂದು ಅಥವಾ ಎರಡು ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬನ್ನಿ ನಿಮ್ಮ ಪಿತ್ತ ಹೇಗೆ ಮಾಯವಾಗುತ್ತದೆ ನೋಡಿ. ಮತ್ತೊಂದು ಮಾಹಿತಿ ಪುನರ್ಪುಳಿ ಈ ಸಮಯದಲ್ಲಿಯೇ ಸಿಗಲಿದೆ. ಅಂದ್ರೆ ಏಪ್ರಿಲ್, ಮೇ ತಿಂಗಳಲ್ಲಿ. ಈಗಲೇ ಸಿಪ್ಪೆಯನ್ನು ಒಣಗಿಸಿ ಶೇಖರಣೆ ಮಾಡಿಟ್ಟುಕೊಂಡರೆ ಬಹಳ ಅನುಕೂಲವಾಗುತ್ತದೆ. ಹೀಗೆ ಪಿತ್ತ ಹೆಚ್ಚಾದಾಗ ಬಳಕೆಗೆ ಬರಲಿದೆ.

ಎಳ್ಳಿ ಕಾಯಿಯಿಂದಾನೂ ಪಿತ್ತವನ್ನು ಕಡಿಮೆ ಮಾಡಿಕೊಳ್ಳಬಹುದು. ಬೆಳಗ್ಗೆ ಎದ್ದ ಕೂಡಲೇ ಎಳ್ಳಿ ಕಾಯಿ ಹಾಕಿ ಮಾಡಿದ ಜ್ಯೂಸ್ ಅನ್ನು ಒಂದೆರಡು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಪಿತ್ತ ವಾಸಿಯಾಗುತ್ತದೆ, ತಲೆ ಸುತ್ತು ಕೂಡ ಬರುವುದಿಲ್ಲ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment