ನಾಗಸಾಧುಗಳು ಬಂದರೆ ಕೊಂಚ ಹುಷಾರು : ತುಮಕೂರಿನಲ್ಲಿ ನಕಲಿ ನಾಗಸಾಧುಗಳಿಂದ ಮೋಸ..!

suddionenews
1 Min Read

ತುಮಕೂರು: ದೇವರ ವೇಶ, ನಾಗಸಾಧುಗಳು ಎಂದರೆ ಜನರಿಗೆ ಭಯ ಭಕ್ತಿ ಜಾಸ್ತಿ. ಹೀಗಾಗಿಯೇ ಅಂಗಡಿ ಬಳಿಯೋ ಮನೆ ಬಳಿಯೋ ಬಂದರೆ ದೇವರಂತೆ ಟ್ರೀಟ್ ಮಾಡುತ್ತಾರೆ. ಭಕ್ತಿಗೆ ಕಾಣಿಕೆಯನ್ನು ಕೊಡುತ್ತಾರೆ. ಆದರೆ ಈ ರೀತಿ ಭಕ್ತಿ, ಗೌರವ ತೋರಿಸಲು ಹೋದವರಿಗೆ ಮೋಸವಾಗಿದೆ. ಆದರೆ ಅವರು ನಕಲಿ ಸಾಧುಗಳಾಗಿದ್ದಾರೆ.

ನಗರದ ಎಂಜಿ ರೋಡಲ್ಲಿ ಮಲ್ನಾಡ್ ಎಂಬ ಸ್ಟುಡಿಯೋ ಇದೆ. ಆ ಸ್ಟುಡಿಯೋಗೆ ನಕಲಿ ಸಾಧುಗಳು ಎಂಟ್ರಿ ಕೊಟ್ಡಿದ್ದಾರೆ. ಬಳಿಕ ಸ್ಟುಡಿಯೋ ಮಾಲೀಕ ಚಂದ್ರು ಅವರ ಕೈಗೆ ರುದ್ರಾಕ್ಷಿ ಹಾಕಿದ್ದಾರೆ. ಬಳಿಕ ಎರಡು ಕೈಹಿಡಿದು ಮಂತ್ರ ಹೇಳಲು ಶುರು ಮಾಡಿದ್ದಾರೆ. ಧ್ಯಾನ ಮಾಡುವುದಕ್ಕೆ ಹೇಳಿ ಚಂದ್ರು ಕೈಲಿದ್ದ ಉಂಗುರವನ್ನೇ ಬಿಚ್ಚಿಕೊಂಡಿದ್ದಾರೆ. ಏನೇನೋ ಮಂತ್ರ ಹೇಳಿಕೊಟ್ಟು ಒಳ್ಳೆಯದ್ದಾಗುತ್ತೆ ಎಂದು ನಂಬಿಸಿದ್ದಾರೆ.

ನಕಲಿ ಸಾಧುಗಳ ಮಾತನ್ನು ನಂಬಿ ಮಾಲೀಕ ಚಂದ್ರು ಧ್ಯಾನದಲ್ಲಿ ಮಗ್ನರಾಗಿದ್ದಾರೆ‌. ಆದ್ರೆ ಧ್ಯಾನದಿಂದ ಹೊರ ಬಂದ ಮೇಲೆ ಗೊತ್ತಾಗಿದ್ದು, ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಮಾಲೀಕ ಚಂದ್ರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಸಾಧುಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರು ನಕಲಿ ಸಾಧುಗಳು ಈ ಕೃತ್ಯ ನಡೆಸಿದ್ದಾರೆ. ಹತ್ತಿರದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks