Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಲಿಂಗಾಯಿತ ಧರ್ಮ ಸಂಸ್ಕೃತಿ ಯಂತೆ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ : ಶರಣೆ ಮುಕ್ತಾ ಕಾಗಿ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್.15 : ಮಹಿಳಾ ಸಮಾನತೆಯ ಜೊತೆ ಜೊತೆಗೆ ಸಮ ಸಮಾಜ ಕಟ್ಟುವ ಕನಸು ಬಸವಾದಿ ಶರಣರದ್ದಾಗಿತ್ತು ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಶರಣೆ ಮುಕ್ತಾ ಕಾಗಿ ಹೇಳಿದರು.

ನೀಲಕಂಠೇಶ್ವರ ಸಭಾಂಗಣದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರ ತಾತ್ವಿಕ ಚಿಂತನೆಗಳು ಇಂದಿನ ಸಂವಿಧಾನದ ಬೆಳಕು ವೈದಿಕ ಅಸಮಾನತೆಯ ವೈಭವೀಕರಣದಿಂದ ದೂರ ಸರಿದು ಸರ್ವರನ್ನು ಒಳಗೊಳ್ಳುವ ಲಿಂಗಾಯಿತ ಧರ್ಮವನ್ನು ಪರಿಕಲ್ಪಿಸಿ ಅನುಷ್ಠಾನಗೊಳಿಸಿದ್ದು, ಇವತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವಾದಿ ಶರಣರ ಪರಿಹಾರವಾಗಬಲ್ಲ ಈ ಧರ್ಮ ಇತರೆ ಧರ್ಮಗಳಿಗಿಂತ ವಿಭಿನ್ನ ಮತ್ತು ಅನನ್ಯವಾದ್ದರಿಂದ ಬೇರೆ ಧರ್ಮಗಳ ಪ್ರಭಾವದಿಂದ ಬಿಡುಗಡೆಗೊಳಿಸಿ ಸ್ವತಂತ್ರವಾಗಿಸಬೇಕಿದೆ ಎಂದರು.

ಲಿಂಗಾಯಿತ ಧರ್ಮ ಸಂಸ್ಕøತಿಯಂತೆ ಎಲ್ಲರೂ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ. ಏಕೆಂದರೆ ಅಸಮಾನತೆಯ ಅನಿಷ್ಠಗಳ ವಿರುದ್ದದ ರಕ್ಷಣೆಯಾಗಿಯೇ ಇಂದಿನ ಮೀಸಲಾತಿ ಅನಿವಾರ್ಯ ಎಂದು ತಿಳಿಸಿದರು.

ಸಾಹಿತಿ ಮತ್ತು ಸಂಸ್ಕøತಿ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಲಿಂಗಾಯಿತ ಸ್ವತಂತ್ರ ಧಾರ್ಮಿಕವಾಗಿ ಸಾಂವಿಧಾನಾತ್ಮಕವಾಗಿ ಘೋಷಿಸಲ್ಪಟ್ಟರೆ ಅಸಮಾನತೆಯ ಬೇರು ಬಿಳಿಲುಗಳನ್ನು ವಿಸ್ತರಿಸಿಕೊಳ್ಳುತ್ತ ನಡೆದು ಬರುತ್ತಿರುವ ವೈದ್ದಿಕ ಸಂಸ್ಕøತಿಯನ್ನು ಜನಪರ ಮತ್ತು ಜೀವಪರಗೊಳಿಸುವ ಏಕೈಕ ಮಾರ್ಗವೆಂದರೆ ಬಸವಾದಿ ಶರಣರ ವಿಸ್ಮಯದ ನೆಲೆಯಲ್ಲಿ ಲಿಂಗಾಯಿತ ಧರ್ಮವನ್ನು ಅನುಷ್ಠಾನಗೊಳಿಸುವುದಾಗಿದೆ ಎಂದು ಹೇಳಿದರು.

ಕೆಂಚವೀರಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಕೈಗಾರಿಕೋದ್ಯಮಿಗಳ ಪ್ರತಿನಿಧಿ ವೀಣ ಸುರೇಶ್, ನಿವೃತ್ತ ಉಪನ್ಯಾಸಕಿ ರೋಹಿಣಿ ಬಸವರಾಜ್, ಎ.ಬಿ.ಧನಂಜಯ, ಜಿ.ಎಂ.ಶಿವಾನಂದ್, ವೇದಿಕೆಯಲ್ಲಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸೋಮಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿತಾ ವೀರೇಶ್ ಪ್ರಾರ್ಥಿಸಿದರು. ಗೀತ ಸ್ವಾಗತಿಸಿದರು. ರಶ್ಮಿ ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...