ಮೈಸೂರು: ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿಟಿ ದೇವೇಗೌಡ ಅವರಿಗೆ ಪಕ್ಷದಿಂದ ಇನ್ನಷ್ಟು ದೂರವಿಡಲು ಜೆಡಿಎಸ್ ತೀರ್ಮಾನಿಸಿದೆ ಎನ್ನಲಾಗ್ತಾ ಇದೆ. ಹೀಗಾಗಿಯೇ ಸಾ.ರಾ.ಮಹೇಶ್ ಅವರನ್ನ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲಿಸಬೇಕು ಎಂಬ ಚರ್ಚೆಗಳು ನಡೆದಿವೆಯಂತೆ. ಇದರ ನಡುವೆ ಜಿಟಿ ದೇವೇಗೌಡ ಅವರು ನಾನು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದಾನೇ ಸ್ಪರ್ಧಿಸ್ತೇನೆ ಎಂಬ ಮಾತನ್ನ ಹೇಳಿದ್ದಾರೆ.
ಮೈಸೂರಿನ ಜನತೆಗೆ ಹಾಗೂ ಚಾಮುಂಡೇಶ್ವರಿ ಜನತೆಗೆ ನಾನು ಏನು ಅಂತ ಗೊತ್ತಿದೆ. ಯಾವ ನಾಯಕರಿಗೂ ನಾನು ದ್ರೋಹ ಮಾಡಲ್ಲ. ಆ ಬುದ್ದಿಯೂ ನನಗಿಲ್ಲ. ನಾನು ಯಾವತ್ತು ನಾಯಕತ್ವವನ್ನು ನಂಬಿ ಬೆಂಬಲ ಕೊಡುವವನು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ನಂತರ 3 ಬಾರಿ ಎಂಎಲ್ಎ ಆಗಿ ಕುಮಾರಪರ್ವ, ಮರಳಿ ಮನೆಗೆ ಕಾರ್ಯಕ್ರಮ ಮಾಡಿದ್ದೇನೆ.
ಇವತ್ತಿಗೂ ನಾನು ದೇವೇಗೌಡ, ಕುಮಾರಸ್ವಾಮಿ ಜೊತೆಗೆ ಒಟ್ಟಾಗಿಯೇ ಇದ್ದೀವಿ. ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಅವರ ಮನೆಯ ಮಗನ ರೀತಿ, ಸಹೋದರನ ರೀತಿ ನೋಡಿಕೊಂಡಿದೆ. ನಾನು ಯಾವತ್ತು ಪಕ್ಷದ ವರಿಷ್ಠರ ವಿರುದ್ಧ ಮಾತನ್ನಾಡಿಲ್ಲ. ನನ್ನ ಕ್ಷೇತ್ರ ದೊಡ್ಡದು. ಅದರ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ. ಅಸೆಂಬ್ಲಿ ಚುನಾವಣೆ ಇನ್ನು ಎರಡು ವರ್ಷ ಇದೆ. ಚುನಾವಣೆ ಸಂದರ್ಭದಲ್ಲಿ ಅದನ್ನು ಮಾತನಾಡೋಣಾ . ನಾನು ಜೆಡಿಎಸ್ ನಲ್ಲಿಯೇ ಇದ್ದೇನೆ. ಒಂದು ಕಾಲು ಕೂಡ ಹೊರಗೆ ಇಟ್ಟಿಲ್ಲ. ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ. ಈಗಲೂ ಜೆಡಿಎಸ್ ನಲ್ಲಿ ಇದ್ದೇನೆ. ಮುಂದೆಯು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುತ್ತೇನೆ. ಚುನಾವಣೆ ಸಮೀಪ ಬಂದಾಗ ಎಲ್ಲವೂ ಒಳ್ಳೆಯದೆ ಆಗುತ್ತೆ. ನಮಗೂ ಒಳ್ಳೆಯ ದಿನ ಬರುತ್ತದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










