ಯಡಿಯೂರಪ್ಪ ಅವರು ಕಣ್ಣೀರಾಕಿ ಹೊರ ನಡೆದ ಇತಿಹಾಸ ನೆನಪಿದೆ : ಪ್ರಿಯಾಂಕ್ ಖರ್ಗೆ

1 Min Read

ಬೆಂಗಳೂರು: ಸರ್ಕಾರದ ಕುರ್ಚಿ ಕದನ ಗೊಂದಲ ಇನ್ನು ಇದೆಯಾ ಎಂಬ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನ ತಿಳಿಸಿದ್ದಾರೆ. ಅದನ್ನ ಬಹಿರಂಗವಾಗಿ ಮಾಧ್ಯಮ ಸ್ನೇಹಿತರ ಜೊತೆಗೆ ಕೂತು ಮಾತನಾಡಿದ್ದಾರೆ. ಆ ಇಬ್ಬರೆ ಹೇಳಿದ ಮೇಲೆ ನಾನ್ಯಾರು ಅದನ್ನ ಹೇಳುವುದಕ್ಕೆ. (ಊಟ – ತಿಂಡಿಗೆ) ಕರೆದರು ಅದು ಹೆಡ್ಕೈನ್. ಕರೆಯದೆ ಇದ್ದರು ಹೆಡ್ಲೈನ್. ಕರೆಯದೆ ಇದ್ದರೆ ಸಮನ್ವಯ ಇಲ್ಲ ಅಂತೀರ. ಕರೆದರು ಹೇಡ್ಲೈನ್ ಮಾಡ್ತೀರಿ. ಯಾಕೆ ಅದನ್ನ ಹೇಳಿ ಕೇಳಿ ಮಾಡಬೇಕಾ. ಯಾಕೆ ಡೈಲಿ ಊಟ – ತಿಂಡಿ ಮಾಡಲ್ವಾ. ಈ ಹಿಂದೆ ಪರಮೇಶ್ವರ್ ಅವರು ಮಾಡಿದಾಗ ಅದಕ್ಕೂ ಆಕ್ಷೇಪ, ಜಾರಕಿಹೊಳಿ ಅವರು ಮಾಡಿದಾಗ ಅದಕ್ಕೂ ಸುದ್ದಿ. ಹಾಗಾದ್ರೆ ನಾವೆಲ್ಲಾ ಸ್ನೇಹುತರು ಸೇರುವುದೇ ಬೇಡ್ವಾ..? ಎಂದಿದ್ದಾರೆ.

ಇದೆ ವೇಳೆ ರಾಹುಲ್ ಗಾಂಧಿ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದು, ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದರ ಉದ್ದೇಶ ಬೇರೆನೆ ಆಗಿತ್ತು. ಅದನ್ನ ನಿಮ್ಮ ಮುಂದೆ ಕೂಡ ಹೇಳಿದ್ದೀನಿ. ಅದನ್ನೇ ದಿನಾ ಕೇಳ್ಕೋಳ್ತಾ ಕೂತರೆ ಹೇಗೆ..? ಈಗ ಸಿಎಂ ಹಾಗೂ ಡಿಸಿಎಂ ಇಬ್ಬರನ್ನು ಭೇಟಿಯಾದೆ. ನಿಮ್ಮ‌ ಸಮ್ಮುಖದಲ್ಲಿಯೇ ಭೇಟಿಯಾಗಿದ್ದೇನೆ. ನಿಮ್ಮ ಕ್ಯಾಮೆರಾಗಳು ಬಿಡ್ತಾವಾ..? ಈಗ ನಾನು ಸಚಿವ. ಸಿಎಂ, ಡಿಸಿಎಂ ಭೇಟಿಯಾಗದೆ ಇನ್ನ್ಯಾರಿಗೆ ಭೇಟಿಯಾಗ್ಲಿ ಎಂಬ ಪ್ರಶ್ನೆ ಕೇಳಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ರಾಜ್ಯದ ವಿಚಾರವನ್ನ ತಿಳಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ನಮ್ಮ ನಾಯಕರೆ. ಕೇಳಿದ್ರೆ ಹೇಳ್ತೀನಿ. ಆದ್ರೆ ನಮ್ಮದೇನೋ ವೈಯಕ್ತಿಕ ವಿಚಾರಕ್ಕೆ ಭೇಟಿಯಾಗಿ ಬಂದಿದ್ದೀನಿ ಎಂದಿದ್ದಾರೆ. ಬಿಜೆಪಿಯವರು ಒಂದು ಸಲ ಆದ್ರೂ ಸ್ವಂತ ಬಲದ ಮೇಲೆ ಬಂದಿದ್ದಾರಾ..? ಒಂದು ಸಲ ಐದು ಮುಖ್ಯಮಂತ್ರಿಗಳಿದ್ದರು. ಇವರು ಸ್ಥಿರತೆ, ಅಧಿಕಾರ ಹಂಚಿಕೆ ಬಗ್ಗೆ ಮಾತಾಡ್ತಾರೆ. ಇದೇ ಬ್ಯಾಂಕ್ವೆಟ್ ಹಾಲ್ ನಿಂದ ಯಡಿಯೂರಪ್ಪ ಅವರು ಕಣ್ಣೀರಾಕಿ ಹೊರ ನಡೆದ ಇತಿಹಾಸ ನಡೆದಿದೆ ಎಂದಿದ್ದಾರೆ.

Share This Article