Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನು ಗಾಬರಿಯಾಗಿ ಮನೆಯಿಂದ ಹೊರಗೆ ಬಂದು ಬಿಟ್ಟೆ : ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಇಂದು‌ ನಗರದ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದ ಬೆಳಗ್ಗೆಯಿಂದ ಪೋಷಕರು ಗಾಬರಿಯಲ್ಲಿಯೇ ಇದ್ದಾರೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಯಗೊಂಡಿದ್ದಾರೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ಮಾತನಾಡಿದ್ದು, ಟಿವಿ ನೋಡುತ್ತಿದ್ದೆ. ಗಾಬರಿಗೊಂಡು ಮನೆಯಿಂದ ಹೊರಗೆ ಬಂದೆ ಎಂದಿದ್ದಾರೆ.

 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಗಾಬರಿ ಬೇಡ. ತಮ್ಮ ಮಕ್ಕಳು ಸುರಕ್ಷಿತವಾಗಯೇ ಇರುತ್ತಾರೆ. ಟಿವಿ ನೋಡುತ್ತಾ ಇದ್ದೆ. ಈ ರೀತಿ ಬಂದಿದ್ದಕ್ಕೆ ನಾನು ಹಾಬರಿಯಾಗಿಬಿಟ್ಟೆ. ನನ್ನ ಸಂಬಂಧಪಟ್ಟ ಶಾಲೆಗಳು, ನನ್ನ ಮನೆಯ ಎದುರಗಡೆಯ ಶಾಲೆಯ ಹೆಸರು ಬರುತ್ತಾ ಇತ್ತು. ಹೀಗಾಗಿ ಗಾಬರಿಯಾಗಿ ಮನೆಯಿಂದ ಹೊರಗಡೆ ಬಂದೆ. ಪೊಲೀಸರು ಏನು ಮೇಲ್ ಬಂದಿದೆ ಎಂದು ತೋರಿಸಿದ್ದಾರೆ.

 

ನಮ್ಮ ಪೊಲೀಸ್ ಅಧಿಕಾರಿಗಳೆಲ್ಲಾ ಮಾತನಾಡಿದರು. ಇಷ್ಟು ಸಮಯದ ತನಕ ಇದೊಂದು ಫೇಕ್ ನ್ಯೂಸ್ ಎಂದೇ ಕಾಣುತ್ತಾ ಇದೆ. ಆದರೆ ನಾವೂ ಜಾಗರೂಕರಾಗಿರಬೇಕು. ಪೊಲೀಸ್ ಕಮೀಷನರ್ ಕೂಡ ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ. ಎಲ್ಲಾ ಕಡೆಗೂ ಪೊಲೀಸ್ ಸೆಕ್ಯೂರಿಟಿ, ಬಾಂಬ್ ಸ್ಕ್ವಾಡ್ ಬಂದಿದೆ. ನನ್ನ ಮನೆ ಎದುರು ಆಗುವುದಕ್ಕೆ ಆಗುವುದಿಲ್ಲ. 24 ಗಂಟೆ ಪೊಲೀಸರು ಅಲ್ಲಿಯೇ ಇರುತ್ತಾರೆ. ಬೆಂಗಳೂರು ನಾಗರಿಕನಾಗಿ ಹೇಳುತ್ತೀನಿ. ಯಾವುದೇ ಭಯ ಬೇಡ. ನಿಮ್ಮ ಮಕ್ಕಳು ಸುರಕ್ಷಿತವಾಗಿ ಇರುತ್ತಾರೆ. ಬೇಕು ಅಂತಾನೆ ಕೆಲವರು ಮಿಸ್ ಯೂಸ್ ಮಾಡುತ್ತಾರೆ. ಹಬ್ಬ ನಡೆಯುತ್ತಾ ಇರುತ್ತದೆ. ಊಟ ಮಾಡುವವರು ಮಾಡುತ್ತಾ ಇರುತ್ತಾರೆ. ನಾವೂ ಜಾಗರೂಕತೆಯಿಂದ ಇರಬೇಕು ಅಷ್ಟೇ ಎಂದು ಇಂದು ಬಂದ ಬಾಂಬ್ ಬೆದರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment