Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಂಗೆ ಕೇಕ್ ಇಷ್ಟ ಇಲ್ಲ.. ನಿಮ್ ಏರಿಯಾದಲ್ಲಿಯೇ ಊಟ ಹಾಕಿ : ಹುಟ್ಟುಹಬ್ಬದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಿವಿ ಮಾತು

Facebook
Twitter
Telegram
WhatsApp

ಬೆಂಗಳೂರು: ಸೆಪ್ಟೆಂಬರ್2.. ಕಿಚ್ಚ ಸುದೀಪ್ ಅವ ಹುಟ್ಟುಹಬ್ಬ, ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೂ, ಹಾರ, ಕೇಕ್ ಅಂತ ತೆಗೆದುಕೊಂಡು ಬರ್ತಾರೆ. ಆದರೆ ಇದೆಲ್ಲದ್ದಕ್ಕೂ ಕಿಚ್ಚ ಸುದೀಪ್ ಮನವಿಯೊಂದನ್ನು ಮಾಡಿದ್ದಾರೆ. ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ಹೇಳಿದ್ದಾರೆ.

‘ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ನಾನು ಹಲವು ನಟರನ್ನು ನೋಡಿಕೊಂಡೆ ಬೆಳೆದವನು. ನನಗೂ ತುಂಬಾ ಆಸೆ ಇತ್ತು. ಆದರೆ ಹೋಗ್ತಾ ಹೋಗ್ತಾ ಬದಲಾಯಿತು. ಮನುಷ್ಯತ್ವದ ಬಗ್ಗೆಯೂ ಅರಿವಾಯಿತು. ಹೂಗಳು ಬಿದ್ದಿರುತ್ತವೆ. ಆ ಹೂ ಮಾಡಿಸುವುದಕ್ಕೆ ಇವ್ರು ಎಷ್ಟು ತಿಂಗಳು ಪ್ಲ್ಯಾನ್ ಮಾಡಿರ್ತಾರೆ. ಆ ಹಾರಗಳನ್ನೇನಾದರೂ ಹಾಕಿದ್ರೆ ಕುತ್ತಿಗೆ ಕಟ್ ಆಗುತ್ತೆ. ಅಷ್ಟು ದಪ್ಪ ಇರುತ್ತೆ. ಆದರೆ ಒಂದು ಸೆಕೆಂಡ್ ಗೆ ಇರುವ ಬೆಲೆ ಅದು. ಆಮೇಲೆ ಇನ್ನೆಲ್ಲೋ ಬಿದ್ದಿರುತ್ತೆ.

ಇನ್ನು ಕೇಕ್. ಸ್ಪರ್ಧೆ ಮೇಲೆ ಕೇಕ್ ಕಟ್ ಮಾಡ್ತೇವೆ. ಆ ಸಂಘದವರು ಇಷ್ಟು ಮಾಡಿದ್ರಾ..? ನಮ್ಮ ಸಂಘದವರು ಇಷ್ಟು ಮಾಡ್ತೀವಿ ಅನ್ನೋ ಕಾಂಪಿಟೇಷನ್. ಬೇಜಾರ್ ಮಾಡಿಕೊಳ್ಳುತ್ತಾರೆ ಅಂತ ತಿನ್ನೋದು, ಒಳಗೆ ಹೋಗಿ ವಾಂತಿ ಮಾಡೋದು. ಬೇಸರ ಮಾಡಿಕೊಳ್ಳುತ್ತಾರೆ ಅಂತ ಒಂದಷ್ಟು ವರ್ಷ ಅರ್ಜೆಸ್ಟ್ ಮಾಡಿಕೊಂಡೆ, ಹೇಳಿದೆ ಬೇಡ‌ ಅಂತ ಆದ್ರೂ ಕೇಳಲಿಲ್ಲ. ಕಟ್ ಮಾಡಿದ ಮೇಲೆ ಆ‌ ಕೇಕಿನಷ್ಟು ಅನಾಥ ಬೇರೆ ಯಾರೂ ಅಲ್ಲ. ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. ಆ ಥರದ ಸಂಭ್ರಮ ನನಗೆ ಬೇಡ ಸರ್. ನಾನಂತು ತಿಂತಾ ಇಲ್ಲ. ನಾನು ಎಲ್ಲರಿಗೂ ರಿಕ್ವೆಸ್ಟ್ ಮಾಡಿಕೊಂಡಿರೋದು ಸ್ಮಾಲೆಸ್ಟ್ ಕೇಕ್ 100-150 ರೂಪಾಯಿ ಅದು ಮುಂದೆ ಸಾವಿರಾರು ಗಟ್ಟಲೆ ಆಗುತ್ತೆ. ಅದೇ ದುಡ್ಡಲ್ಲಿ ನಿಮ್ಮ ಏರಿಯಾದಲ್ಲಿ ಹೊಟ್ಟೆ ತುಂಬುತ್ತೆ. ನನಗ್ಯಾಕೆ ಕೇಕು. ನಂಗೆ ಕೇಕ್ ಇಷ್ಟ ಇಲ್ಲ’ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!